ಗೋಕಾಕ:ವಿದ್ಯಾರ್ಥಿಗಳು ವಿದ್ಯೆಯನ್ನು ಆಸ್ತಕಿಯಿಂದ ಪಡೆದುಕೊಂಡೆರೆ ಜೀವನದಲ್ಲಿ ಸುಖ ತಾನಾಗಿಯೇ ಬರುತ್ತದೆ : ಡಾ.ಮೋಹನ ಭಸ್ಮೆ

ವಿದ್ಯಾರ್ಥಿಗಳು ವಿದ್ಯೆಯನ್ನು ಆಸ್ತಕಿಯಿಂದ ಪಡೆದುಕೊಂಡೆರೆ ಜೀವನದಲ್ಲಿ ಸುಖ ತಾನಾಗಿಯೇ ಬರುತ್ತದೆ : ಡಾ.ಮೋಹನ ಭಸ್ಮೆ
ಗೋಕಾಕ ಫೆ 8 : ವಿದ್ಯಾರ್ಥಿಗಳು ವಿದ್ಯೆಯನ್ನು ಆಸ್ತಕಿಯಿಂದ ಪಡೆದುಕೊಂಡೆರೆ ಜೀವನದಲ್ಲಿ ಸುಖ ತಾನಾಗಿಯೇ ಬರುತ್ತದೆ ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.
ಗುರುವಾರದಂದು ನಗರದಲ್ಲಿ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದವರು ಗೋಕಾಕ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಚೈತನ್ಯ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಪ್ರಾರಂಭಿಕ ಹಂತ, ಅದನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಶರೀರ ಮತ್ತು ಆತ್ಮ ಎರೆಡು ಏಕಾಗ್ರತೆಯಿಂದ ಇಟ್ಟುಕೊಂಡು ಪಾಠವನ್ನು ಕಲಿತಕೊಳ್ಳಬೇಕು ಅಂದಾಗ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಕೊಳ್ಳಬಹುದು.
ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಬಂದಹಾಗೆ ವಿದ್ಯಾರ್ಥಿ ಜೀವನದಲ್ಲಿ ಸಹ ಮುಳ್ಳುಗಳು ಬರುತ್ತವೆ. ಅದನ್ನು ಸಮರ್ಥವಾಗಿ ಎದುರಿಸಿ ಮುಳ್ಳುಗಳನ್ನು ಹೂಗಳಾಗಿ ಪರಿವರ್ತಿಸಿಕೊಂಡು ತಮ್ಮ ಬದುಕನ್ನು ಅಂದವಾಗಿಸಿಕೊಳ್ಳಬೇಕು ಎಂದ ಅವರು ಮಾನಸಿಕವಾಗಿ ಸ್ಥೈರ್ಯ ತುಂಬಿಕೊಂಡು ವಿದ್ಯಾರ್ಥಿಗಳು ಓದಬೇಕು. ಕಾರ್ಯಾಗಾರದಲ್ಲಿ ಹೇಳಿದ ಪಾಠಗಳನ್ನು ತಮ್ಮ ಜೀವನದಲ್ಲಿಯೂ ಸಹ ಅಳವಡಿಸಿಕೊಂಡರೆ 100ಕ್ಕೆ 100 ರಷ್ಟು ಫಲಿತಾಂಶ ತರಲು ಸಾಧ್ಯ ಎಂದ ಅವರು ಸಮಾಜ ಚನ್ನಾಗಿ ಇರಬೇಕಾದರೆ ತಾವು ಮೊದಲು ಚನ್ನಾಗಿ ಇರಬೇಕು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಯಿಂದ ಆಗಮಿಸಿದ್ದ ಮಂಜುನಾಥ್ ಗಾಳಿಮರಡಿ ಹಾಗೂ ಪ್ರಶಾಂತ್ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಕೌಶಲ್ಯಗಳ ಬಗ್ಗೆ ತರಬೇತಿಯನ್ನು ನೀಡಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ನಗರಸಭೆ ಸದಸ್ಯ ಜಯಾನಂದ ಹುಣ್ಣಚ್ಯಾಳಿ ಇದ್ದರು.