RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಅವರೊಂದಿಗೆ ಕೈಜೋಡಿಸೋಣ : ಕಾರ್ಮಿಕ ಮುಖಂಡ ಅಂಬಿರಾವ

ಗೋಕಾಕ:ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಅವರೊಂದಿಗೆ ಕೈಜೋಡಿಸೋಣ : ಕಾರ್ಮಿಕ ಮುಖಂಡ ಅಂಬಿರಾವ 

ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಅವರೊಂದಿಗೆ ಕೈಜೋಡಿಸೋಣ : ಕಾರ್ಮಿಕ ಮುಖಂಡ ಅಂಬಿರಾವ

ಗೋಕಾಕ ಜ 19 : ಶಾಸಕ ರಮೇಶ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಅವರೊಂದಿಗೆ ಕೈಜೋಡಿಸೋಣ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.
    ಅವರು, ಗುರುವಾರದಂದು ನಗರದಿಂದ ಸಮೀಪದ ಶಿಂಗಳಾಪುರ ಗ್ರಾಮದಲ್ಲಿ 1.ಕೋಟಿ ವೆಚ್ಚದ ಜೆಜೆಎಮ್ ಕುಡಿಯುವ ನೀರು ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
    ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಲೋಳಸೂರ ಗ್ರಾಪಂ ಅಧ್ಯಕ್ಷ ರಶೀದಹ್ಮದ ಪೀರಜಾದೆ, ಶಮಶುದ್ದಿನ ಮುಲ್ಲಾ, ಮಾಯಪ್ಪ ಮುತ್ತೆಪ್ಪಗೋಳ, ಭೀಮಶಿ ಈರಪ್ಪಗೋಳ, ಸುರೇಶ ಬಾರ್ಕಿ, ಭೀಮಶಿ ಜಂಗನವರ, ಅಪ್ಪಣ್ಣ ಮಾಳಂಗಿ, ಈಶ್ವರ ಮಾಡಲಗಿ ಸೇರಿದಂತೆ ಗ್ರಾಮದ ಹಿರಿಯರು ಇತರರು ಉಪಸ್ಥಿತರಿದ್ದರು.

Related posts: