ರಾಯಬಾಗ:ರಾಯಬಾಗ ಸಿಪಿಐ ಎಚ್.ಡಿ ಮುಲ್ಲಾಗೆ ಸತ್ಕಾರ

ರಾಯಬಾಗ ಸಿಪಿಐ ಎಚ್.ಡಿ ಮುಲ್ಲಾಗೆ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ರಾಯಬಾಗ ಅ 6 :
ಪಟ್ಟಣದಲ್ಲಿ ಶಾಂತಿ ಸೌಹಾರ್ದತೆ ಪಾಲನೆ ಮಾಡುವಲ್ಲಿ ಸಿ.ಪಿ ಐ ಎಚ್ ಡಿ ಮುಲ್ಲಾ ಅವರ ಪಾತ್ರ ಮಹತ್ವದಾಗಿದೆ ಎಂದು ಅಶೋಕ ಮೇತ್ರಿ ಹೇಳಿದರು.
ಪಟ್ಟಣದ ಚಿಂಚಲಿ ರಸ್ತೆಯ ಹತ್ತಿರ ನವರಾತ್ರಿಯ ನಿಮಿತ್ಯ ಹಮ್ಮಿಕೊಂಡ ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಸಿಪಿಐ ಅವರನ್ನು ಸತ್ಕರಿಸಿ ಮಾತನಾಡುತ್ತಾ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುತ್ತಾ ಬಂದಿರುವ ಸಿಪಿಐ ಅವರು ಜನರ ಮನದಲ್ಲಿ ನೆಲೆಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಮಹೇಶ್ ಕರಮಡಿ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಅಮರೇಶ್ ತಾಳಿಕೋಟಿ, ಯುವರಾಜ್ ಮನಿಕೇರಿ, ಉದ್ಯಮಿ ಸುರೇಶ್ ನಾಯಕ್, ಹಿರಿಯ ವಕೀಲರಾದ ಆರ್ ಜಿ ಕುಲಕರ್ಣಿ ಹಾಗೂ ದುರ್ಗಾ ಮಾತೆಯ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.