ಗೋಕಾಕ:ಉಪಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಅಭಿವೃದ್ದಿ ಪರ್ವ ಆರಂಭವಾಗಲಿದೆ : ಸಿಎಂ ಯಡಿಯೂರಪ್ಪ

ಉಪಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಅಭಿವೃದ್ದಿ ಪರ್ವ ಆರಂಭವಾಗಲಿದೆ : ಸಿಎಂ ಯಡಿಯೂರಪ್ಪ ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 23 : ಸರ್ಕಾರದಲ್ಲಿ ಯಾವುದೇ ಅನುದಾನದ ಕೊರತೆಯಿಲ್ಲ, ಉಪಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಅಭಿವೃದ್ದಿ ಪರ್ವ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಶನಿವಾರದಂದು ಸಂಜೆ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಉಪಚುನಾವಣೆಯ ಹಿನ್ನಲೆಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ನೆರವಾದ ಈಗ ಉಪಚುನಾವಣೆಯನ್ನು ಬಿಜೆಪಿಯಿಂದ ಎದುರಿಸುತ್ತಿರುವ ಎಲ್ಲ ಕ್ಷೇತ್ರಗಳನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸುತ್ತೇನೆ. ಉಪಚುನಾವಣೆಯಲ್ಲಿ ಮತದಾರರ ಆಶಿರ್ವಾದದಿಂದ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾವಿ ಸಚಿವ ಎಂದು ರಮೇಶ ಅವರನ್ನು ಸಂಭೋದಿಸಿ ಮಾತನಾಡಿದ ಯಡಿಯೂರಪ್ಪನವರು, ಚುನಾವಣೆ ಮುಗಿದು ವಿಜಯೋತ್ಸವಕ್ಕೆ ಬಂದ ಹಾಗೆ ನನಗೆ ಈದಿನ ಭಾಸವಾಗುತ್ತಿದೆ. ಈಗಾಗಲೇ ನಾವು ಚುನಾವಣೆಯನ್ನು ಗೆದ್ದಾಗಿದೆ, ಆದರೆ 1ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವನ್ನು ಕಾಣಬೇಕಾಗಿದೆ. ರಮೇಶ ಜಾರಕಿಹೊಳಿ ಸೇರಿದಂತೆ 17 ಜನ ಶಾಸಕರು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಆಗಲ್ಲಿಲ್ಲ ಅಂತ ಸಮೀಶ್ರ ಸರ್ಕಾರದಿಂದ ಹೊರ ಬಂದು ಒಟ್ಟಾಗಿ ಬಂಡಾಯವೆದ್ದಿದ್ದರಿಂದಲೇ ನಾನು ಮುಖ್ಯಮಂತ್ರಿ ಆಗಲು ಪ್ರಮುಖ ಕಾರಣವಾಗಿದೆ ಎಂದರು. 120 ದಿನದ ಆಡಳಿತ ಅವಧಿಯಲ್ಲಿ ನೆರೆಗೆ ತುತ್ತಾದಾಗ ಮನೆ ಕಟ್ಟಿಸಿಕೊಳ್ಳಲ 5 ಲಕ್ಷ, ಈಗಾಗಲೇ ಮೊದಲ ಕಂತಾಗಿ 1 ಲಕ್ಷ, 50 ಸಾವಿರ ಬಾಡಿಗೆ, ಸಂತ್ರಸ್ತರಿಗೆ 10ಸಾವಿರ ರೂಗಳನ್ನು ನೀಡಿದ ಉದಾಹರಣೆ ದೇಶದ ಇತಿಹಾಸದಲ್ಲಿಯೇ ಮೊದಲು. ಹಜ್-ಭವನ ನಿರ್ಮಿಸಲು 40 ಕೋಟಿ ಹಾಗೂ 5 ಎಕರೆ ಜಾಗ, ಜಾತಿ, ಮತ, ಪಂಥ ಬೇದ ಭಾವವಿಲ್ಲದೆ ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು. ರಮೇಶ ಜಾರಕಿಹೊಳಿ ಹೋರಾಟ ಹಾಗೂ ಗಟ್ಟಿ ನಿರ್ಧಾರ ಮಾಡಿದ್ದರಿಂದಲೇ ಇಂದು ನಾವು ವಿಧಾನಸೌಧದ 3ನೇ ಮಹಡಿಯಲ್ಲಿ ಇದ್ದೇವೆ. ಇದನ್ನು ನಾವು ಜೀವಿತಾವಧಿಯಲ್ಲಿ ಮರೆಯುದಿಲ್ಲ, ನಮಗೆ ಅಧಿಕಾರ ಕೊಟ್ಟವರಿಗೆ ನಮ್ಮ ಪಕ್ಷ ಒಳ್ಳೆಯ ಸ್ಥಾನಮಾನ ನೀಡುತ್ತದೆ. ಅವರ ಋಣ ನಮ್ಮ ಮೇಲೆ ಬಹಳವಿದೆ, ಅದನ್ನು ಎಂದಿಗೂ ತೀರಿಸಲು ಆಗುವದಿಲ್ಲ, ಉಪಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಯಾವುದೇ ವ್ಯಾಮೋಹಕ್ಕೆ ಒಳಗಾಗದೇ ಎಲ್ಲ 15 ಕ್ಷೇತ್ರಗಳಲ್ಲಿಯೂ ಒಂದೂ ಮತ ಬೇರೆಡೆಗೆ ಹೋಗದ ಹಾಗೇ ನೋಡಿಕೊಳ್ಳಬೇಕು. ಗೋಕಾಕದಲ್ಲಿ ರಮೇಶ ಜಾರಕಿಹೊಳಿಗೆ ಮತ ನೀಡಿದರೇ ಆ ಮತ ನನಗೆ ನೇರವಾಗಿ ಬಂದ ಹಾಗೇ ಅಲ್ಲದೇ ಸ್ಥಿರ ಹಾಗೂ ಸುಭದ್ರ ಸರ್ಕಾರಕ್ಕೆ ನೀಡಿದ ಹಾಗೇ ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿದರು. ಘಟ್ಟಿ ಬಸವಣ್ಣ ಯಾತ ನೀರಾವರಿ ಯೋಜನೆಗೆ 350 ಕೋಟಿ, ಮಾಲದಿನ್ನಿ ಕ್ರಾಸದಿಂದ ನೇಸರಗಿ ರಸ್ತೆ ನಿರ್ಮಾಣ ಕಾಮಗಾರಿ, ನೀರಾವರಿ ಕ್ಷೇತ್ರದ ಆಧುನಿಕರಣಕ್ಕೆ, ಕೃಷ್ಣಾ ಮೇಲ್ದಂಡೆ ಯೋಜನೆ, ರೈತರ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ, ನಿರುಧ್ಯೋಗ ಸಮಸ್ಯೆ, ಮಹಿಳೆಯರ ಸಬಲಿಕರಣ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಂಡು ರಾಜ್ಯವನ್ನು ಮಾದರಿಯಾಗಿ ಮಾಡಲಾಗುವುದು ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ದೇಶದಲ್ಲಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳು ನಡೆಯುತ್ತಿವೆ. ಮಹಾರಾಷ್ಟ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿ ಆಗಿದೆ. ದೇಶದಲ್ಲಿ ಕಾಂಗ್ರೇಸ್ ದಿನದಿಂದ ದಿನಕ್ಕೆ ನಿರ್ನಾಮ ಹಂತಕ್ಕೆ ಬರುತ್ತಿದೆ. ಬಿಜೆಪಿಯಿಂದ ರಾಜ್ಯ ಹಾಗೂ ದೇಶದಲ್ಲಿ ಅಭಿವೃದ್ದಿ ಪರ್ವ ಆರಂಭವಾಗಿದೆ ಎಂದು ತಿಳಿಸಿದರು. ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರು ಮಾತನಾಡಿ ಗೋಕಾಕದಲ್ಲಿ ಅಮಿತ್ ಶಾ ಮತ್ತು ಯಡಿಯೂರಪ್ಪ ಅವರನ್ನು ಕರೆತಂದು ಹರ ಸಾಹಸಪಟ್ಟರು ಶಾಸಕ ಸ್ಥಾನವನ್ನು ಗೆಲ್ಲಲು ಆಗಿಲ್ಲ, ಈಗ ಅದು ಕೂಡಿಬಂದಿದೆ, ರಾಜ್ಯದಲ್ಲಿ 104 ಶಾಸಕ ಸ್ಥಾನ ಗಳಿಸಿದರೂ ಸರಕಾರ ಮಾಡೋಕೆ ಆಗಿರಲಿಲ್ಲ, ರಮೇಶ ಜಾರಕಿಹೊಳಿ ಅವರ ಸಹಕಾರದಿಂದ ಅಧಿಕಾರ ಸಿಕ್ಕಿದೆ. ರಮೇಶ ಅವರು ಕಳೆದ 8-10 ತಿಂಗಳಿನಿಂದ ತಮಗೆ ಆದ ಎಲ್ಲ ಅಪಮಾನಗಳನ್ನು ಸಹಿಸಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ನಾನು ಅನೇಕ ಸಾರಿ ಗೋಕಾಕಕ್ಕೆ ಬಂದು ರಮೇಶ ಅವರ ವಿರುದ್ಧ ಭಾಷಣ ಮಾಡಿದ್ದೇನೆ ಅದರೆ ಇಂದು ಅಭಿವೃದ್ಧಿ ಪರವಾಗಿ ಅವರನ್ನು ಬೆಂಬಲಿಸುವಂತೆ ಕೇಳಲು ಬಂದಿದ್ದೇನೆ ಈ ಬಾರಿ ಅವರನ್ನು ಗೆಲ್ಲಿಸಬೇಕೆಂದು ವಿನಂತಿಸಿದರು. ಸಚಿವ ಜಗದೀಶ ಶೆಟ್ಟರ್ ಅವರು ಮಾತನಾಡಿ ಹಠಕ್ಕೆ ಇನ್ನೋಂದು ಅರ್ಥ ರಮೇಶ ಜಾರಕಿಹೊಳಿ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹೊರ ಬಂದು ಬಿಜೆಪಿಯನ್ನು ಬೆಂಬಿಲಿಸಿದ್ದಾರೆ ಇವರ ತ್ಯಾಗದಿಂದ ಈ ಸರಕಾರ ಬಂದಿದೆ ಈ ಚುನಾವಣೆ ಯಡಿಯೂರಪ್ಪ ಅವರ ಚುನಾವಣೆ. ಸ್ಥಿರ ಸರಕಾರಕ್ಕೆ ಇದು ದಿಕ್ಸೂಚಿ ಬೆಳಗಾವಿ ಜಿಲ್ಲೆ ರಾಜಕೀಯ ಶಕ್ತಿ ರಾಜ್ಯದಲ್ಲಿಯೇ ಶಕ್ತಿಶಾಲಿಯಾಗಿದೆ. ಕಾಂಗ್ರೆಸ್ ಅಂತ್ಯ ಪ್ರಾರಂಭವಾಗಿದೆ ಸಿದ್ದರಾಮಯ್ಯ ಏಕಾಂಗಿಯಾಗಿ ಆಗಿದ್ದಾರೆ ಯಾವ ನಾಯಕರು ಅವರೊಂದಿಗೆ ಪ್ರಚಾರಕ್ಕಾಗಿ ಹೋಗುತ್ತಿಲ್ಲ ಅದು ಒಡೆದ ಮನೆಯಾಗಿದೆ. ಸಿದ್ದರಾಮಯ್ಯ ಅವರ ತಮ್ಮ ಅಹಂಕಾರದಿಂದ ಮೂಲೆಗುಂಪು ಆಗುತ್ತಿದ್ದಾರೆ ಎಂದು ತಿಳಿದರು. ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಮಾತನಾಡಿ ಚುನಾವಣೆ ಬಿಜೆಪಿ ಅಧಿಕಾರ ದಾಹದಿಂದ ಬಂದಿಲ್ಲ, ಕಾಂಗ್ರೆಸ್ ಪಕ್ಷದ ಸೊಕ್ಕಿನಿಂದ ಬಂದಿದೆ. ಇನ್ನೂ 13 ಶಾಸಕರು ನಮ್ಮೊಂದಿಗೆ ಇದ್ದಾರೆ ಕಾಂಗ್ರೆಸ್ ಪಕ್ಷ ಖಾಲಿ ಮಾಡುವ ಶಕ್ತಿ ನಮಗೆ ಇದೆ. ಯಡಿಯೂರಪ್ಪ ಅವರು ಮಾತು ಕೊಟ್ಟಂತೆ ನಡೆದುಕೊಳ್ಳುತಾರೆ. ಅಭಿವೃದ್ದಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಕೋರಿದರು. ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ ಈ ಉಪ ಚುನಾವಣೆ ಉತ್ತರ ಪ್ರದೇಶದಲ್ಲಿ ಅಮಿತ ಶಾ ಮಾಡಿದಂತೆ ಮಾಡಬೇಕು ಎಲ್ಲರ ನಿರೀಕ್ಷೆ ಮಾಡಿದಂತೆ ಇದು ದ್ವೇಷದ ರಾಜಕಾರಣ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದು ನಮ್ಮ ಪುನ್ಯ , ರಮೇಶ ಜಾರಕಿಹೊಳಿ ಗೆಲ್ಲಿಸಿ ಕೈ ಬಲಪಡಿಸಬೇಕೆಂದು ವೇದಿಕೆ ಮೇಲೆ ಸಚಿವೆ ಶಶಿಕಲಾ ಜೊಲ್ಲೆ , ಶಾಸಕರುಗಳಾದ ಉಮೇಶ ಕತ್ತಿ, ಎ.ಎಸ್.ಪಾಟೀಲ (ನಡಹಳ್ಳಿ) ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೋಳೆ, ಆನಂದ ಮಾಮನಿ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ , ವಿಧಾನ ಪರಿಷತ ಸದಸ್ಯ ಮಹಾಂತೇಶ ಕವಟಗಿಮಠ, ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಾಟೀಲ, ಡಾ ಭೀಮಶಿ ಜಾರಕಿಹೊಳಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಎಂ ಎಲ್ ಮುತ್ತೆನ್ನವರ, ಮುಕ್ತಾರ ಪಠಾಣ,ಈರಣ್ಣಾ ಕಡಾಡಿ, ಎಸ್.ವಿ.ದೇಮಶೆಟ್ಟಿ, ವಿರುಪಾಕ್ಷಿ ಯಲಿಗಾರ, ಶಕೀಲ ಧಾರವಾಡಕರ, ಜಗದೀಶ ಹಿರೇಮನಿ, ಭಾರತಿ ಮಗದುಮ್ಮ ಸೇರಿದಂತೆ ಅನೇಕರು ಇದ್ದರು