RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ನೆರೆ ಸಂತ್ರಸ್ತರ ಶೆಡಗಳಿಗೆ ಶಾಸಕ ಸತೀಶ ಜಾರಕಿಹೊಳಿ ಭೇಟಿ : ಸ್ವಂತ ಖರ್ಚಿನಲ್ಲಿ ಶೆಡಗಳಿಗೆ ಬಾಗಿಲು, ದೀಪ ಕಲ್ಪಿಸುವ ವ್ಯವಸ್ಥೆ

ಗೋಕಾಕ:ನೆರೆ ಸಂತ್ರಸ್ತರ ಶೆಡಗಳಿಗೆ ಶಾಸಕ ಸತೀಶ ಜಾರಕಿಹೊಳಿ ಭೇಟಿ : ಸ್ವಂತ ಖರ್ಚಿನಲ್ಲಿ ಶೆಡಗಳಿಗೆ ಬಾಗಿಲು, ದೀಪ ಕಲ್ಪಿಸುವ ವ್ಯವಸ್ಥೆ 

ನೆರೆ ಸಂತ್ರಸ್ತರ ಶೆಡಗಳಿಗೆ ಶಾಸಕ ಸತೀಶ ಜಾರಕಿಹೊಳಿ ಭೇಟಿ : ಸ್ವಂತ ಖರ್ಚಿನಲ್ಲಿ ಶೆಡಗಳಿಗೆ ಬಾಗಿಲು, ದೀಪ ಕಲ್ಪಿಸುವ ವ್ಯವಸ್ಥೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 24 :

 

 

ನೆರೆ ಸಂತ್ರಸ್ತರ ಆಶ್ರಯಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ ತಗಡಿನ ಶೆಡೆಗಳಿಗೆ ಮಾಜಿ ಸಚಿವ,ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿದರು .

ಗುರುವಾರದಂದು ನಗರದ ಹೊರ ವಲಯದ ಸಮಾಜಿಕ ಅರಣ್ಯ ಇಲಾಖೆಯ ಪಕ್ಕದಲ್ಲಿ ಹಾಕಿರುವ ತಾತ್ಕಾಲಿಕ ತಗಡಿನ ಶೆಡಗಳಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರ ಅಳಲನ್ನು ಆಲಿಸಿ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆರೆ ಸಂತ್ರಸ್ತರಿಗೆ ತರಾತುರಿಯಲ್ಲಿ ತಾತ್ಕಾಲಿಕ ಶೆಡಗಳನ್ನು ನಿರ್ಮಿಸಲಾಗಿದ್ದು, ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ತಾಲೂಕಾಡಳಿತ ಎಡವಿದೆ. ನಿರ್ಮಾಣ ಗೊಂಡಿರುವ ಎಲ್ಲ 60 ಶೆಡಗಳಿಗೆ ಸ್ವಂತ ಖರ್ಚಿನಲ್ಲಿ ಬಾಗಿಲು , ಪ್ರತಿಯೊಂದು ಶೆಡ ಒಳಗೆ ವಿದ್ಯುತ್ ದ್ವೀಪವನ್ನು ಮತ್ತು ತಾತ್ಕಾಲಿಕ ಸ್ನಾನ ಗೃಹಗಳಿಗೆ ಬಾಗಿಲುಗಳನ್ನು ತಕ್ಷಣದಲ್ಲೆ ಅಳವಡಿಸಲಾಗುವದು . ಮುಂದಿನ ದಿನಗಳಲ್ಲಿ ಸಮಸ್ಯೆ ಉದ್ಭವಿಸದಂತೆ ಶಾಶ್ವತ ಕ್ರಮ ಕೈಗೋಳ್ಳಲಾಗುವದು ಎಂದು ಹೇಳಿದರು

ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಬಸವರಾಜ ಸಾಯನ್ನವರ , ನಗರಸಭೆ ಸದಸ್ಯ ಭಗವಂತ ಹುಳ್ಳಿ, ವಿವೇಕ ಜತ್ತಿ , ರಿಯಾಜ ಚೌಗಲಾ, ಶಿವು ಪಾಟೀಲ ಸೇರಿದಂತೆ ಇತರರು ಇದ್ದರು

Related posts: