ಗೋಕಾಕ:ನಗರದ ಎಪಿಎಮ್ಸಿ ಆವರಣದಲ್ಲಿ ಮೇವು ಬ್ಯಾಂಕ್ಗೆ ಚಾಲನೆ
ನಗರದ ಎಪಿಎಮ್ಸಿ ಆವರಣದಲ್ಲಿ ಮೇವು ಬ್ಯಾಂಕ್ಗೆ ಚಾಲನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 20 :
ನಗರದ ಎಪಿಎಮ್ಸಿ ಆವರಣದಲ್ಲಿ ಬರಗಾಲದ ನಿಮಿತ್ಯ ಜಾನವಾರುಗಳಿಗೆ ಮೇವಿನ ಕೊರತೆಯನ್ನು ಹೋಗಲಾಡಿಸಲು ಸೋಮವಾರದಂದು ಮೇವು ಬ್ಯಾಂಕ್ಗೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ಚಾಲನೆ ನೀಡಿದರು.
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಮೋಹನ ಕಮತ ಅವರು ಪತ್ರಿಕೆಯೊಂದಿಗೆ ಮಾತನಾಡಿ ಬರಗಾಲದ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನಲ್ಲಿ ಮೇವಿನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ರೈತರಿಗೆ ಅನುಕೂಲ ಮಾಡಿಕೊಡಲು ಈ ಮೇವು ಬ್ಯಾಂಕ್ನ್ನು ಸ್ಥಾಪಿಸಲಾಗಿದ್ದು, ಕೆ.ಜಿ.ಗೆ 2ರೂಗಳಂತೆ ವಿತರಿಸಲಾಗುವುದು ಇದರ ಉಪಯೋಗವನ್ನು ರೈತರು ಪಡೆಯಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಉಪತಹಶೀಲದಾರ ವಾಯ್.ಎಲ್.ಡಬ್ಬನವರ, ಕಂದಾಯ ನಿರೀಕ್ಷಕ ಎಸ್.ಬಿ.ಕಟ್ಟಿಮನಿ, ಪಶು ಸಂಗೋಪನಾ ಇಲಾಖೆಯ ಡಾ|| ಶಶಿಕಾಂತ ಕೌಜಲಗಿ, ಗ್ರಾಮ ಲೆಕ್ಕಾಧಿಕಾರಿಗಳಾದ ಡಿ.ಎಸ್.ದೇಸಾಯಿ, ಆರ್.ಎಸ್.ಕಾಗಲಕರ ಸೇರಿದಂತೆ ಅನೇಕರು ಇದ್ದರು.