ಗೋಕಾಕ:ಉಪ್ಪಾರ ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿಬೇಕು: ಪ್ರಕಾಶ ಹೊಳೆಪ್ಪಗೋಳ
ಉಪ್ಪಾರ ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು: ಪ್ರಕಾಶ ಹೊಳೆಪ್ಪಗೋಳ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 11 :
ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಬೆಳವಣಿಗೆ ಹೊಂದಲು ಶಿಕ್ಷಣದ ಅವಶ್ಯಕತೆ ಹೆಚ್ಚಿದ್ದು ಉಪ್ಪಾರ ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಬರುವಂತೆ ಕರೆ ನೀಡಿದರು.
ಅವರು, ನಗರದ ಮಿನಿವಿಧಾನ ಸೌಧದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಪೂಜೆ ನೆರವೆರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಶ್ರೀ ಭಗೀರಥ ಮಹಾರಾಜರು ತಮ್ಮ ಸತತ ತಪಸ್ಸಿನಿಂದ ಗಂಗೆಯನ್ನು ಧರೆಗೆ ತಂದ ಪವಾಡ ಪುರುಷರು, ಶ್ರೀ ಭಗೀರಥ ಮಹಾರಾಜರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಉಪತಹಶೀಲದಾರ ಜಿ ಎಸ್ ಕುಲಕರ್ಣಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಜನ್ಮಟ್ಟಿ, ಉಪ್ಪಾರ ಸಮಾಜದ ತಾಲೂಕಾಧ್ಯಕ್ಷ ಹಾಗೂ ಮಾಜಿ ಜಿಪಂ ಸದಸ್ಯ ರಾಮಣ್ಣ ತೋಳಿನವರ, ನ್ಯಾಯವಾದಿಗಳಾದ ಎಸ್ ಎಮ್ ಹತ್ತಿಕಟಗಿ, ಎಲ್ ಎಲ್ ಬೂದಿಗೊಪ್ಪ, ಕುಶಾಲ ಗುಡೇನ್ನವರ, ಜಿ ಆರ್ ಪೂಜೇರಿ, ಎಸ್ ಎಸ್ ಪಾಟೀಲ, ಮರೆಪ್ಪಗೋಳ, ಮುತ್ತೆಪ್ಪ ಕುಳ್ಳೂರ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ವಿಠ್ಠಲ ಹೆಜ್ಜೆಗಾರ, ಯಲ್ಲಪ್ಪ ನಂದಿ, ಮಾಯಪ್ಪ ತಹಶೀಲ್ದಾರ, ಎಪಿಎಮ್ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಭೀಮಶಿ ಭರಮನ್ನವರ, ಮಲ್ಲಿಕಾರ್ಜುನ ಹೊಸಪೇಠೆ ಸೇರಿದಂತೆ ಉಪ್ಪಾರ ಸಮಾಜದ ಹಿರಿಯರು ಇತರರು ಇದ್ದರು.