RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು : ಜಯಂತ ಕೆ.ಎಸ್

ಗೋಕಾಕ:ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು : ಜಯಂತ ಕೆ.ಎಸ್ 

ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು : ಜಯಂತ ಕೆ.ಎಸ್

 
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 27 :

 
ಪ್ರತಿಯೊಬ್ಬರು ಪ್ರತಿ ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು. ಸೇವೆ ಮಾಡಿಸಿಕೊಳ್ಳುವವರು ಇದ್ದಾಗ ಮಾತ್ರ ಸೇವೆ ಮಾಡುವವರು ಅವಶ್ಯಕವಾಗಿರುತ್ತಾರೆ. ನಾವು ಯಾವುದೇ ಕಾಯಕ, ಸೇವೆಯನ್ನು ಅಹಂ ಭಾವದಿಂದ ಸಲ್ಲಿಸಲು ಅಣಿಯಾಗಬಾರದು ಎಂದು ಮೈಸೂರಿನ ಸ್ವಾಮಿ ವಿವೇಕಾನಂದ ಯುತ್ ಮೂವಮೆಂಟ್ ಸಂಸ್ಥೆಯ ಯೋಜನಾ ನಿರ್ದೇಶಕ ಜಯಂತ ಕೆ.ಎಸ್. ಹೇಳಿದರು.
ಗೋಕಾಕದ ಶಿವಾ ಫೌಂಡೇಶನ್ ಹಾಗೂ ಕಟಕೋಳದ ಚೈತನ್ಯ ವುಮೇನ್ಸ್ ಸೋಸಾಯಿಟಿ ಸಹಯೋಗದಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಚೈತನ್ಯ ವಸತಿ ಶಾಲೆಯಲ್ಲಿ ಶನಿವಾರ ಏ.27 ರಂದು ನಡೆದ ನಿರ್ಗತಿಕ, ಅನಾಥ, ಅಂಗವಿಕಲ ಹಾಗೂ ಎಚ್‍ಐವಿ ಭಾದಿತ ಮಕ್ಕಳಿಗಾಗಿ ಪುನ:ಶ್ಚೇತನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ನಿರ್ಗತಿಕ, ಅನಾಥ, ಅಂಗವಿಕಲ ಹಾಗೂ ಎಚ್‍ಐವಿ ಭಾದಿತ ಮಕ್ಕಳ ಶ್ರೇಯೋಭಿವೃದ್ಧಿಗೆ ಸಹಾಯ, ಸಹಕಾರ ಅವಶ್ಯಕವಾಗಿದೆ ಎಂದರು.
ಬೆಳಗಾವಿ ಆಶ್ರಯ ಫೌಂಡೇಶನ್ ಸಂಸ್ಥಾಪಕಿ ನಾಗರತ್ನ ಆರ್. ಅವರು ಮುಖ್ಯತಿಥಿಗಳಾಗಿ, ಚೈತನ್ಯ ಗ್ರುಪ್ಸ್‍ನ ಸಂಸ್ಥಾಪಕ ಸಿದ್ದಣ್ಣ ಹೊರಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಕಾಕ ಶಿವಾ ಫೌಂಡೇಶನದ ಶಾನೂರ ಹಿರೇಹೊಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುನ:ಶ್ಚೇತನ ಶಿಬಿರದಲ್ಲಿ ಪಾಲ್ಗೊಂಡ ನಿರ್ಗತಿಕ, ಅನಾಥ, ಅಂಗವಿಕಲ ಹಾಗೂ ಎಚ್‍ಐವಿ ಭಾದಿತ ಮಕ್ಕಳಿಗಾಗಿ ಪಠ್ಯ ಹಾಗೂ ಪಠ್ಯೇತರ ವಿವಿಧ ಸ್ಪರ್ಧೆ ಆಯೋಜಿಸಿ, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಗುವದು ಎಂದು ಇಲ್ಲಿಯ ಚೈತನ್ಯ ವಸತಿ ಶಾಲೆಯ ಆಡಳಿತಾಧಿಕಾರಿ ಚಂದ್ರು ಹಾಲೋಳ್ಳಿ ತಿಳಿಸಿದರು.
ಗ್ರಾಮದ ಶಿಕ್ಷಣಪ್ರೇಮಿ ಗೌಡಪ್ಪ ದೇಯಣ್ಣವರ, ರಮೇಶ ಪೂಜೇರ, ರಾಜಗೌಢಾ ಗೌರಾಯಿ, ವೆಂಕಟೇಶ ನಾಯ್ಕ, ಸುರೇಶ ಮಠಪತಿ, ಬಸವರಾಜ ಕೊಳ್ಳಾನಟ್ಟಿ, ಬಸಪ್ಪ ಮೇಳೆಣ್ಣವರ, ಎಸ್.ವೈ.ಪಾಟೀಲ, ರಮೇಶ ನಾಯ್ಕ, ಎಸ್.ಎಸ್.ಪಾಟೀಲ, ಬಿ.ಎಚ್.ಮುಂಡಿಗನಾಳ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಹಲವು ಎನ್‍ಜಿಒ ಮುಖ್ಯ ಪ್ರತಿನಿಧಿಗಳು, ಗ್ರಾಮದ ಚೈತನ್ಯ ಗ್ರುಪ್ಸ್‍ನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.

Related posts: