RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಎಲ್ಲರೂ ಕುಳಿತು ಮಾತನಾಡಿ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು; ಸಹೋದರರಿಗೆ ಮಾಜಿ ಸಚಿವ ಬಾಲಚಂದ್ರ ಸಲಹೆ

ಗೋಕಾಕ:ಎಲ್ಲರೂ ಕುಳಿತು ಮಾತನಾಡಿ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು; ಸಹೋದರರಿಗೆ ಮಾಜಿ ಸಚಿವ ಬಾಲಚಂದ್ರ ಸಲಹೆ 

ಎಲ್ಲರೂ ಕುಳಿತು ಮಾತನಾಡಿ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು; ಸಹೋದರರಿಗೆ ಮಾಜಿ ಸಚಿವ ಬಾಲಚಂದ್ರ ಸಲಹೆ
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಏ 23 :

 

ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಗರದ ಕೆಬಿಎಸ್ ನಂ 3 ಶಾಲೆಯ ಮತಗಟ್ಟೆ ಸಂಖ್ಯೆ 131 ರಲ್ಲಿ ತಮ್ಮ ಮತವನ್ನು ಚಲಾಯಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ಬಿಜೆಪಿ ಪರ ಅಲೆ ಇದ್ದು, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ. 4ನೇ ಬಾರಿಗೆ ಸುರೇಶ ಅಂಗಡಿ ಸಂಸದರಾಗಿ ಆಯ್ಕೆಯಾಗುವುದು ಖಚಿತ. ಲೋಕಸಭಾ ಚುನಾವಣೆಯ ಪಲಿಂತಾಶದ ನಂತರ ಕೇಂದ್ರದಲ್ಲಿ ಬಲಿಷ್ಠವಾಗಿ ಎನ್‍ಡಿಎ ಸರ್ಕಾರ ರಚಿಸಲಿದ್ದು ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ. ಮೈತ್ರಿ ಸರ್ಕಾರ ಉರಳಲಿದೆ ಎಂದು ಒಗಟಿನಲ್ಲಿ ಹೇಳಿದರು.
ಸಹೋದರ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್‍ನಿಂದ ಒಂದು ಹೆಜ್ಜೆ ಹೊರಗೆ ಕಾಲಿಟ್ಟಿದ್ದು, ಒಲ್ಲದ ಮನಸ್ಸಿನಿಂದ ಕಾಂಗ್ರೆಸ್‍ನಲ್ಲಿ ಇದ್ದಾರೆ. ಅವರು ಮುಂದಾಳತ್ವ ವಹಿಸಿದರೆ ಅವರ ಮುಖಾಂತರ ಬಿಜೆಪಿ ಒಳ್ಳೆಯದಾಗಬಹುದು ಎಂದು ತಿಳಿಸಿದರಲ್ಲದೇ ಕುಟುಂಬ ವಿಷಯದಲ್ಲಿ ನಾವೆಲ್ಲ ಸಹೋದರರು ಒಂದೆಯಾಗಿರಬೇಕೆಂಬುದು ನನ್ನ ಅಭಿಲಾಷೆ ಇದ್ದು, ರಾಜಕಾರಣದಲ್ಲಿ ಕೆಲವೊಂದು ಭಿನ್ನವಾದ ವಿಚಾರಗಳು ಇರುತ್ತವೆ. ಮಾಧ್ಯಮಗಳ ಮುಂದೆ ಕುಟುಂಬಕ್ಕೆ ಸಂಬಂಧಿಸಿದ ಹೇಳಿಕೆಯನ್ನು ನೀಡಿದೇ ಎಲ್ಲರೂ ಕುಳಿತು ಮಾತನಾಡಿ ಇದ್ದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು. ಇದರ ಸಂಬಂಧವಾಗಿ ನಾನು ಚಿಕ್ಕವನಾದರು ಸಹಿತ ಸಹೋದರರೊಂದಿಗೆ ಮಧ್ಯಸ್ಥಿಕೆಯನ್ನು ವಹಿಸಲು ಸಿದ್ದವಿರುವುದದಾಗಿ ತಿಳಿಸಿದ ಅವರು ರಮೇಶ ಹಾಗೂ ಸತೀಶ ಅವರಿಗೆ ನನ್ನದೊಂದು ಸಲಹೆ ಎನೆಂದರೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದೇ ಸಹೋದರರೆಲ್ಲರೂ ಒಂದೇಯಾದರೆ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯವನ್ನೇ ನಾವು ಆಳಬಹುದಾಗಿದೆ ಎಂದರು.
ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರೀಯಿಸಿದ ಶಾಸಕ ಬಾಲಚಂದ್ರ ಅವರು, ಸಹೋದರ ರಮೇಶ ಜಾರಕಿಹೊಳಿ ಅವರು ಬಿಜೆಪಿಯಿಂದ ಒಂದು ರೂಪಾಯಿನು ಪಡೆದಿಲ್ಲ, ದುಡ್ಡಿಗಾಗಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ, ಸ್ವಂತ ಹಣ ಹಾಗೂ ಸಾಲ ಮಾಡಿಯಾದರೂ ಚುನಾವಣೆಯಲ್ಲಿ ಬೇರೆಯೊಬ್ಬ ವ್ಯಕ್ತಿಯನ್ನು ಗೆಲ್ಲಿಸುವ ವ್ಯಕ್ತಿಯಾಗಿದ್ದು ಬೇರೆ ಕಾರಣಗಳಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಶಿವಶಂಕರಪ್ಪ ಅವರು ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

Related posts: