ಗೋಕಾಕ:ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಕಛೇರಿಯ ಉದ್ಘಾಟನೆ
ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಕಛೇರಿಯ ಉದ್ಘಾಟನೆ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 18 :
ಗ್ರಾಮದಲ್ಲಿ ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಕಛೇರಿಯ ಉದ್ಘಾಟನೆ ಹಾಗೂ ಪ್ರಾರಂಭೋತ್ಸವದ ಪೂಜಾ ಸಮಾರಂಭ ಸೋಮವಾರ ಫೆ.18 ರಂದು ನಡೆಯಿತು.
ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿ ನೂತನ ಆನಂದಕಂದ ಚಿಟ್ಸ್ ಪ್ರಾವೈಟ್ ಲಿ. ನೂತನ ಪ್ರಧಾನ ಕಛೇರಿಯ ಉದ್ಘಾಟನೆಯನ್ನು ಮಹಾಲಕ್ಷ್ಮೀ, ಸರಸ್ವತಿ ಮಹಾಪೂಜೆಯೊಂದಿಗೆ ನೆರವೇರಿಸಿದರು. ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಕೋಣಿ ಅಧ್ಯಕ್ಷತೆ, ಭಾಗೋಜಿಕೊಪ್ಪದ ಶಿವಯೋಗೀಶ್ವರ ಹಿರೇಮಠದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು.
ಎಮ್.ಐ.ನೀಲಣ್ಣವರ, ಈರಣ್ಣ ಸಿದ್ನಾಳ, ಸಂಗಯ್ಯ ಹಿರೇಮಠ, ವಿಠ್ಠಲ ಕೋಣಿ, ಸುಭಾಷ ಜಂಬಗಿ, ರಾಮಣ್ಣ ಬಳಿಗಾರ, ಪರಮಾನಂದ ಕೋಣಿ, ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಮಲ್ಲಪ್ಪ ಕಂಬಿ, ಈರಪ್ಪ ದೇಯಣ್ಣವರ, ವೀರಭದ್ರ ದಂಡಿನ, ನಿರ್ವಾಣಿ ಕತ್ತಿ, ಶಿವರಾಜ ಪತ್ತಾರ, ಸಂತೋಷ ಮಹಾಲ್ಮನಿ, ಅರ್ಜುನ ಬ್ಯಾಗಿ, ಬೀರಪ್ಪ ಕರೆಣ್ಣವರ, ಸಂಜೀವ ಪಣದಿ, ಈರಪ್ಪ ಬಳಿಗಾರ ಸೇರಿದಂತೆ ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಕಛೇರಿಯ ಆಡಳಿತ ಮಂಡಳಿ ಸದಸ್ಯರು, ಗಣ್ಯರು, ವಿವಿಧ ಸಂಘ,ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಮತ್ತೀತರರು ಇದ್ದರು.