ಗೋಕಾಕ:ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಶಿವಲಿಂಗಪ್ಪ ಬಳಿಗಾರ
ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಶಿವಲಿಂಗಪ್ಪ ಬಳಿಗಾರ
ಗೋಕಾಕ ಸೆ 30 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಶತಮಾನೋತ್ಸವ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ 4ನೇ ವರ್ಷಾಚರಣೆ ಹಿನ್ನೆಯಲ್ಲಿ “ಸ್ವಚ್ಛ ಹೀ ಸೇವಾ” ಜನಾಂದೋಲನ ಕಾರ್ಯಕ್ರಮವನ್ನು ಶನಿವಾರದಂದು ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಗ್ರಾಮ ಪಂಚಾಯತ ವತಿಯಿಂದ ಹಮ್ಮಿಕೊಂಡು ಸ್ವಚ್ಛತಾ ಜಾಗೃತ ಕಾರ್ಯಕ್ರಮಕ್ಕೆ ಗ್ರಾ.ಪಂ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮಹಿಳೆಯರು ಪ್ರತಿಯೊಂದು ಕುಟುಂಬಕ್ಕೆ ಶೌಚಾಲಯವನ್ನು ನಿರ್ಮಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಈಗಾಗಲೇ ಸರ್ಕಾರ ನೀಡಿದ ಮೀತಿಯನ್ನು ಗ್ರಾಮ ಪಂಚಾಯತ ವತಿಯಿಂದ ಪೂರ್ಣ ಗೊಳಿಸಿದ್ದು ಇದಕ್ಕೆ ಗ್ರಾಮದ ಮುಖಂಡರು ಮತ್ತು ಸದಸ್ಯರುಗಳ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ, ಸಿಡಿಪಿಒ ಅರುಣ ನಿರಗಟ್ಟಿ, ಗ್ರಾ.ಪಂ ಸದಸ್ಯರುಗಳಾದ ಬನಪ್ಪ ಕಪರಟ್ಟಿ, ವಿಠ್ಠಲ ಜೊತ್ತೆನ್ನವರ, ಸಾಂವಕ್ಕ ಕಳ್ಳಿಗುದ್ದಿ, ನಾಗವ್ವ ಹಂಚಿನಮನಿ, ಸಕ್ಕೂಬಾಯಿ ಸವದತ್ತಿ, ಶಾಂತವ್ವ ಹಿಟ್ನಾಳ, ಬಸನಗೌಡ ಪಾಟೀಲ, ಸುಭಾಷ ಹಾವಾಡಿ, ಕಾಳವ್ವ ಶಿವಾಪೂರ, ರೇಣುಕಾ ಹರಿಜನ, ಬಾಳಪ್ಪ ಬುಳ್ಳಿ, ಅಶೋಕ ಬಂಡಿವಡ್ಡರ, ರಮೇಶ ದಳವಾಯಿ, ಭೀಮವ್ವ ಬುಳ್ಳಿ, ಜಯಶ್ರೀ ಹೊಸಟ್ಟಿ, ಪಿಡಿಓ ವೈ.ಐ. ಹೊಸಮನಿ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಇದ್ದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ರಸ್ತೆಗಳನ್ನು ಸ್ವಚ್ಛ ಮಾಡಲಾಯಿತು.