ಗೋಕಾಕ:ಅತ್ಯಾಚಾರವೆಸಗಿದ ಆರೋಪಿಗೆ ಗಲ್ಲು ಶಿಕ್ಷೆ ವಿದಿಸುವಂತೆ ಕರವೇ ಆಗ್ರಹ : ಪ್ರತಿಕೃತಿ ದಹಿಸಿ ಆಕ್ರೋಶ
ಅತ್ಯಾಚಾರವೆಸಗಿದ ಆರೋಪಿಗೆ ಗಲ್ಲು ಶಿಕ್ಷೆ ವಿದಿಸುವಂತೆ ಕರವೇ ಆಗ್ರಹ : ಪ್ರತಿಕೃತಿ ದಹಿಸಿ ಆಕ್ರೋಶ
ಗೋಕಾಕ ಸೆ: 20 ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ ಬಸವೇಶ್ವರ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ಬೋಸಲೆ ವಿರುದ್ಧ ಘೋಷಣೆಗಳನ್ನು ಕೂಗಿ ಅತ್ಯಾಚಾರಿಯ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಕಾರ್ಯಕರ್ತರು ಮೆರವಣಿಗೆ ಮುಖಾಂತರ ತಹಶೀಲ್ದಾರ ಕಛೇರಿಗೆ ತೆರಳಿ ತಹಶೀಲ್ದಾರ ಜಿ. ಎಸ್. ಮಾಳಗಿ ಮುಖಾಂತರ ಕೇಂದ್ರ ಗೃಹ ಸಚಿವರು ಹಾಗೂ ರಾಜ್ಯಗೃಹ ಸಚಿವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಕಳೆದ ರವಿವಾರದಂದು ಬಸವರಾಜ ಬೋಸಲೆ ಎಂಬ ಯುವಕ 8 ವರ್ಷ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿ ಅಮಾನವೀಯ ಕೃತ್ಯ ಎಸಗಿದ್ದಾನೆ. ಈ ಹೇಯ ಕೃತ್ಯದಿಂದ ಇಡೀ ಮನುಕುಲ ತಲೆತಗ್ಗಿಸುವಂತಾಗಿದೆ. ದೇಶಾದ್ಯಂತ ಇಂತಹ ಅಮಾನವೀಯ ಕೃತ್ಯಗಳು ಪದೇ ಪದೇ ಜರುಗುತ್ತಿದ್ದು, ಅತ್ಯಾಚಾರವೆಂಬ ಪಿಡಗು ಭಾರತದೇಶಕ್ಕೆ ಮಾರಕವಾಗುತ್ತಿರುವುದು ಖಂಡನೀಯ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನುವನ್ನು ಜಾರಿಗೊಳಿಸಿ ಅದನ್ನು ಪ್ರಾಮಾಣೀಕವಾಗಿ ಅನುಷ್ಠಾನಗೊಳ್ಳುವಂತೆ ಆದೇಶಿಸಿ ಇಂತಹ ಪ್ರಕರಣದಲ್ಲಿ ಸಿಲುಕಿ ಶಿಕ್ಷೆ ಅನುಭವಿಸುತ್ತಿರುವ ಆರೋಪಿಗಳನ್ನು ಮತ್ತು ಈ ಹೇಯ ಕೃತ್ಯವೆಸಗಿದ ಬಸವರಾಜ ಬೋಸಲೆ ಅವನನ್ನು ಯಾವುದೇ ಮುಲಾಜಿಲ್ಲದೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಕ.ರ.ವೇ ಸಾರ್ವಜನಿಕರ ಪರವಾಗಿ ವಿನಂತಿಸುತ್ತದೆ. ಅಲ್ಲದೇ ಆರೋಪಿ ಪರವಾಗಿ ಯಾರೊಬ್ಬರು ವಕಾಲತ್ತು ವಹಿಸಬಾರದೆಂದು ಈ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ಕರವೇ, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಧಿಕ ಹಲ್ಯಾಳ, ಮಲೀಕಜಾನ ತಳವಾರ, ಕೃಷ್ಣಾ ಖಾನಪ್ಪನವರ, ಹೈದರಅಲಿ ಮುಲ್ಲಾ, ದೀಪಕ ಹಂಜಿ, ಮೌಲಾ ಪುಲತಾಂಬೆ, ಮಹಾದೇವ ಮಕ್ಕಳಗೇರಿ, ಯಾಸೀನ ಚಾಂದಖಾನ, ಮುಗಟ ಪೈಲವಾನ, ರಹಿಮಾನ ಮೋಕಾಶಿ, ಶಬ್ಬೀರ ಮುಲ್ಲಾ, ಶೆಟ್ಟೆಪ್ಪ ಗಾಡಿವಡ್ಡರ, ಮಲ್ಲಿಕಾರ್ಜುನ ಕರ್ಝಗಿಮಠ, ಆಸೀಫ ಸನದಿ, ನಿಜಾಮ ನದಾಫ, ಗುರು ಯಮಕನಮರಡಿ, ರಮೇಶ ಕಮತಿ, ಲಕ್ಷ್ಮಣ ಗೊರಗುದ್ದಿ, ನಿಯಾಜ ಪಟೇಲ, ಶ್ರೀಕಾಂತ ಬಾದರವಾಡಿ, ಯಲ್ಲಪ್ಪ ವಣ್ಣೂರ, ಬಸು ಗಾಡಿವಡ್ಡರ, ರವಿ ನಾವಿ, ದುರ್ಗಪ್ಪ ಬಂಡಿವಡ್ಡರ, ಮಲ್ಲಪ್ಪ ತಲೆಪ್ಪಗೋಳ, ಲಕ್ಷ್ಮಣ ಪಾತ್ರೋಟ, ರಾಮ ಕುಡ್ಡೆಮ್ಮಿ, ವೆಂಕಟೇಶ ವಾಗೂಲೆ, ದತ್ತು ಕೋಲ್ಕಾರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.