RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಸಮಾಜದ ಏಳ್ಗೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾದ ಅವಶ್ಯವಿದೆ : ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿ

ಗೋಕಾಕ:ಸಮಾಜದ ಏಳ್ಗೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾದ ಅವಶ್ಯವಿದೆ : ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿ 

ಸಮಾಜದ ಏಳ್ಗೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾದ ಅವಶ್ಯವಿದೆ : ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿ

ಗೋಕಾಕ ಸೆ 15 : ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಮಾಜವು ಬಲವರ್ಧನೆಗೊಳ್ಳಬೇಕಾದರೆ ಚಿಕ್ಕಪುಟ್ಟ ವ್ಯತ್ಯಾಸಗಳನ್ನು ದೂರವಿಟ್ಟು ಸಮಾಜದ ಏಳ್ಗೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾದ ಅವಶ್ಯವಿದೆ ಎಂದು ಹಾವೇರಿ ಜಿಲ್ಲೆ ನರಸಿಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ಇಲ್ಲಿಯ ಅಂಬಿಗರ ಚೌಡಯ್ಯ ವೃತ್ತದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಿಂದ ನಡೆಯುತ್ತಿರುವ ಧರ್ಮ ಜಾಗೃತಿ ಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜ ಒಂದಾದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಪ್ರಜ್ಞಾವಂತರನ್ನಾಗಿ ರೂಪಿಸುವ ಜವಾಬ್ದಾರಿ ಅರಿಯಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತಿ ಹಾಗೂ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ನರಸಿಪುರದಿಂದ ಆರಂಭಗೊಂಡಿರುವ ಚೌಡಯ್ಯನವರ ಧರ್ಮ ಜಾಗೃತಿ ಜ್ಯೋತಿ ಯಾತ್ರೆಯು ಕಳೆದ ಅಗಸ್ಟ್ 20 ರಿಂದ ತಿಂಗಳವರೆಗೆ ನಡೆಯಲಿದೆ. ಧರ್ಮ ಜಾಗೃತಿಗಾಗಿ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಿಜಶರಣ ಅಂಬಿಗರ ಚೌಡಯ್ಯನವರ ವಿಚಾರಗಳನ್ನು ಎಲ್ಲರಿಗೂ ತಿಳಿಸುವುದು. ಸಮಾಜದಲ್ಲಿಯ ಮೌಢ್ಯ ಆಚರಣೆ ಹೋಗಲಾಡಿಸಿ ದೇವರ ಹೆಸರಿನಲ್ಲಿ ನಡೆಯುವ ಪ್ರಾಣಿ ಬಲಿಯನ್ನು ನಿಷೇಧಿಸುವುದು. ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದು. ಸಮುದಾಯವು 39 ಹೆಸರುಗಳಿಂದ ಗುರುತಿಸಿಕೊಂಡಿದ್ದು, ಎಲ್ಲರನ್ನು ಒಂದೇ ವೇದಿಕೆಗೆ ಕರೆತಂದು ಸಮಾಜದ ಮುಖ್ಯ ಬೇಡಿಕೆಯಾದ ಎಸ್.ಟಿ.ಗೆ ಸೇರಿಸಲು ಜನಾಂದೋಲನ ರೂಪಿಸಿ ಸರ್ಕಾರದ ಮೇಲೆ ಒತ್ತಡ ಹೇರುವುದು. ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಸಮಾಜವನ್ನು ಬಲಿಷ್ಠಗೊಳಿಸುವುದು. ಚೌಡಯ್ಯನವರ ಗುರುಪೀಠದ ಅಡಿಯಲ್ಲಿ ವಿಭಾಗಕ್ಕೊಂದು ಶಾಖಾ ಪೀಠಗಳನ್ನು ಸ್ಥಾಪಿಸುವುದು. ಅಂಬಿಗರ ಚೌಡಯ್ಯ ವಿದ್ಯಾಪೀಠದ ಅಡಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲು ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದು. ಇದಕ್ಕಾಗಿ ಶಿಕ್ಷಣ ನಿಧಿ ಹಾಗೂ ದಾಸೋಹ ನಿಧಿಯನ್ನು ಸ್ಥಾಪಿಸುವುದು. ಚೌಡಯ್ಯನವರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯಕ್ರಮವನ್ನು ಈ ಯಾತ್ರೆ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ಶಾಂತಭೀಷ್ಮ ಮಹಾಸ್ವಾಮಿಗಳು ತಿಳಿಸಿದರು.
ಉದ್ಯಮಿ ಹಾಗೂ ಯುವ ಧುರೀಣ ಸಂತೋಷ ರಮೇಶ ಜಾರಕಿಹೊಳಿ, ಅಂಬಿಗರ ಚೌಡಯ್ಯನವರ ಗುರುಪೀಠದ ರಾಜ್ಯ ಕಾರ್ಯದರ್ಶಿ ಬಸವರಾಜ ಸಪ್ಪನ್ನಗೋಳ, ಗಂಗಾಮತಸ್ಥ ಸಮಾಜದ ತಾಲೂಕಾ ಅಧ್ಯಕ್ಷ ಮುದಕಪ್ಪ ತಳವಾರ, ಲಕ್ಷ್ಮಣ ಪಾಶ್ಚಾಪೂರ, ವಾಸುದೇವ ಕೋಲಕಾರ, ಲಗಮಪ್ಪ ತೋರಗಲ, ರಾಮಚಂದ್ರ ಸುಣಗಾರ, ಯಲ್ಲಪ್ಪ ಮೋತ್ಯಾಗೋಳ, ಬಾಳು ಅಂಬಿ, ತಾಪಂ ಸದಸ್ಯ ಬಸು ಹುಕ್ಕೇರಿ, ಸುಭಾಸ ಗಡಕರಿ, ಅರ್ಜುನ ದೇಮನ್ನವರ, ಲಗಮನ್ನಾ ದುಂಡಗಿ, ಶಂಕರ ಬದ್ನಿ, ಸುರೇಶ ಕೋಳಿ, ತೇಜಪ್ಪ ಗುದಗಾಪೂರ, ಲಕ್ಷ್ಮಣ ಯಮಕನಮರಡಿ, ಬಸವರಾಜ ಮೋತ್ಯಾಗೋಳ, ಬಸು ಪಾಶ್ಚಾಪೂರ, ಎಂ.ಎ. ಜಂಬಗಿ, ಸಂತೋಷ ತಡಸಲ, ಸಮಾಜದ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: