RNI NO. KARKAN/2006/27779|Sunday, June 15, 2025
You are here: Home » breaking news » ಮೂಡಲಗಿ:ಶಾಂತಿ ಸುವ್ಯವಸ್ಥೆಗೆ ಸಾರ್ವಜನಿಕರ ಸಹಕಾರ ಮುಖ್ಯ – ಸಿಪಿಐ ಮುರನಾಳ

ಮೂಡಲಗಿ:ಶಾಂತಿ ಸುವ್ಯವಸ್ಥೆಗೆ ಸಾರ್ವಜನಿಕರ ಸಹಕಾರ ಮುಖ್ಯ – ಸಿಪಿಐ ಮುರನಾಳ 

ಶಾಂತಿ ಸುವ್ಯವಸ್ಥೆಗೆ ಸಾರ್ವಜನಿಕರ ಸಹಕಾರ ಮುಖ್ಯ – ಸಿಪಿಐ ಮುರನಾಳ
ಮೂಡಲಗಿ ಸೆ 11 : ಹಬ್ಬಗಳನ್ನು ಮೋಜು ಮಸ್ತಿಗಾಗಿ ಮಾಡದೇ ಏಕತೆ ಮತ್ತು ಒಗ್ಗಟ್ಟು ಮೂಡಿಸುವ ಸಲುವಾಗಿ ಆಚರಿಸಬೇಕು. ಸರ್ವ ಧರ್ಮದವರು ಹಬ್ಬಗಳನ್ನು ಅನ್ನೋನ್ಯತೆಯಿಂದ ಆಚರಿಸಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆಯ ಕಟ್ಟು ನಿಟ್ಟಿನ ನಿಯಮ ಪಾಲನೆಯಲ್ಲಿ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಹೇಳಿದರು.
ಅವರು ಮೂಡಲಗಿ ಪೋಲಿಸ್ ಠಾಣೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡ ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣೇಶ ಮಂಡಳಿಯ ಸದಸ್ಯರು ಮಂಟಪಗಳಲ್ಲಿ ದೀಪ ಕಾಯುವ ನೆಪದಲ್ಲಿ ಜೂಜಾಟದಲ್ಲಿ ತೊಡಗಿದರೆ ಅಂತಹವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸುರಕ್ಷತೆ ದೃಷ್ಠಿಯಿಂದ ಹೆಸ್ಕಾಂ ಕಛೇರಿಯಿಂದ ವಿದ್ಯುತ್ ಸಂಪರ್ಕದ ಪರವಾನಿಗೆ, ಪುರಸಭೆಯವರ ಪರವಾನಿಗೆ, ಪೊಲೀಸ್ ಇಲಾಖೆಯಿಂದ ದ್ವನಿವರ್ಧಕದ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು. ಗಣೇಶ ಮಂಡಳಿಯವರು ಅಶಾಂತಿ ಮೂಡದಂತೆ ನೋಡಿಕೊಳ್ಳಬೇಕು.ಅನಾವ್ಯಶಕ ಖರ್ಚು ಮಾಡದೇ ಸಾಂಸ್ಕøತಿಕ ಕಾರ್ಯಕ್ರಮ, ಮಕ್ಕಳಿಗೆ ಸ್ಪರ್ಧೆ,ಅನ್ನ ಸಂತರ್ಪಣೆಯಂತಹ ಕಾರ್ಯಕ್ರಮಗಳನ್ನು ನೆರವೇರಿಸಿ. ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕಿಡಿಗೇಡಿತನ ಮಾಡಿದರೆ ನಿರ್ದಾಕ್ಷೀಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು.
ಮೂಡಲಗಿ ಪಿಎಸ್‍ಐ ಶರಣೇಶ ಜಾಲಿಹಾಳ ಮಾತನಾಡಿ, ಹಿಂದೂ ಮುಸ್ಲಿಂ ಬಾಂದವರು ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಸಹೋದರತ್ವದಿಂದ ಆಚರಿಸಿ. ಪಟ್ಟಣದ ಶಾಂತತೆಗೆ ಯಾರು ಭಂಗ ತರುವ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದರೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ, ಪಿಒಪಿಯಿಂದ ನಿರ್ಮಿಸಿದ ಮೂರ್ತಿಗಳನ್ನು ಸ್ಥಾಪಿಸದೇ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಮತ್ತು ಜಲ ಸಂರಕ್ಷಣೆಗೆ ಸಹಕರಿಸಿ. ಮಂಡಳಿಯವರು ಮಂಟಪದ ಸುತ್ತ ಸ್ವಚ್ಛತೆಯನ್ನು ಕಾಪಾಡಿ ಮತ್ತು ಗಣೇಶ ವಿಗ್ರಹಗಳನ್ನು ಪುರಸಭೆಯವರು ನಿಗದಿಪಡಿಸಿರುವ ಬಾವಿಗಳಲ್ಲಿಯೇ ವಿಸರ್ಜಿಸಿ ಎಂದು ತಿಳಿಸಿದರು.
ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ನ್ಯಾಯವಾದಿ ಎಲ್.ವಾಯ್ ಅಡಿಹುಡಿ, ಮಲ್ಲಿಕ ಹುಣಶ್ಯಾಳ, ರಾಮು ಝಂಡೆಕುರುಬರ ಮಾತನಾಡಿದರು.
ಸಭೆಯಲ್ಲಿ ಪ್ರೋಪೆಸನರಿ ಪಿಎಸ್‍ಐ ಪರಶುರಾಮ್, ಎಎಸ್‍ಐ ಎ.ಸಿ.ಸಬರದ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ರವೀಂದ್ರ ಸಣ್ಣಕ್ಕಿ, ಹುಸೇನಸಾಬ ಶೇಖ, ಆದಂ ತಾಂಬೋಳಿ, ಶಿವಾನಂದ ಸಣ್ಣಕ್ಕಿ, ಹನುಮಂತ ಗುಡ್ಲಮನಿ, ಚನ್ನಪ್ಪ ಅಥಣಿ, ಅಜೀಜ ಡಾಂಗೆ, ಬಸೀರಅಹ್ಮದ ಫೀರಜಾದೆ, ಯಲ್ಲಪ್ಪ ಸಣ್ಣಕ್ಕಿ ಅನೇಕರು ಉಪಸ್ಥಿತರಿದ್ದರು.
ಡಿ.ಜಿ.ಕೊಣ್ಣೂರ ಸ್ವಾಗತಿಸಿದರು. ಅನೀಲ ಮಡಿವಾಳ ನಿರೂಪಿಸಿದರು, ಎನ್.ಎಸ್ ಒಡೆಯರ ವಂದಿಸಿದರು.

Related posts: