RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಗಣಪತಿ ಮೂರ್ತಿಗಳನ್ನು ತಯಾರಿಸುವ ಮೂರ್ತಿಕಾರರಿಗೆ ಜಾಗೃತಿ ಸಭೆ

ಗೋಕಾಕ:ಗಣಪತಿ ಮೂರ್ತಿಗಳನ್ನು ತಯಾರಿಸುವ ಮೂರ್ತಿಕಾರರಿಗೆ ಜಾಗೃತಿ ಸಭೆ 

ಗಣಪತಿ ಮೂರ್ತಿಗಳನ್ನು ತಯಾರಿಸುವ ಮೂರ್ತಿಕಾರರಿಗೆ ಜಾಗೃತಿ ಸಭೆ

ಗೋಕಾಕ ಅ 29 : ದಶಕಗಳ ಹಿಂದೆ ಗಣೇಶ ಮೂರ್ತಿಗಳನ್ನು ಹದವಾದ ಮಣ್ಣಿನಿಂದ ನೈಸರ್ಗಿಕ ಬಣ್ಣಗಳಿಂದ ತಯಾರಿಸುವ ಕಲೆಯು ಪ್ರಾರಂಭವಾಗಿ ಇಂದು ಪ್ಲಾಸ್ಟರ್‍ಆಫ್ ಪ್ಯಾರೀಸ್ ಮತ್ತು ಹಾನಿಕಾರಕ ರಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳ ಬಳಕೆ ಹೆಚ್ಚಾಗಿದೆ. ಮತ್ತು ಮೂರ್ತಿಗಳನ್ನು ಕುಡಿಯು ನೀರಿನ ಮೂಲಗಳಲ್ಲಿ ವಿಸರ್ಜನೆ ಮಾಡುವದರಿಂದ ಪರಿಸರದ ಮೇಲೆ ಸಾಕಷ್ಟು ಹಾನಿಕಾರಕ ಪರಿಣಾಮಗಳು ಆಗುತ್ತಿವೆ ಎಂದು ಕೊಣ್ಣೂರು ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಹೇಳಿದರು.
ಅವರು ಬುಧವಾರದಂದು ಪುರಸಭೆಯ ಕಾರ್ಯಾಲಯದಲ್ಲಿ ಜರುಗಿದ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿ ಗಣಪತಿ ಮೂರ್ತಿಗಳನ್ನು ತಯಾರಿಸುವ ಮೂರ್ತಿಕಾರರಿಗೆ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಐತಿಹಾಸಿಕ ಪರಂಪರೆಯ ಗಣೇಶ ಉತ್ಸವ ಸಮೀಪಿಸುತ್ತಿದ್ದು ಎಲ್ಲ ಉತ್ಸವಗಳಲ್ಲಿ ತನ್ನದೇ ಆದ ವಿಶೇಷತೆ ಹೊಂದಿರುವ ಗಣಪತಿ ಉತ್ಸವವು ಈ ದೇಶದ ಭವ್ಯ ಪರಂಪರೆಯ ಪ್ರತೀಕವಾಗಿದೆ. ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿ ಪ್ರಾರಂಭವಾದ ಈ ಉತ್ಸವ ಇಂದಿಗೂ ತನ್ನ ಮೆರಗನ್ನು ಕಳೆದುಕೊಂಡಿಲ್ಲ. ಜಿಲ್ಲಾಧಿಕಾರಿಗಳು ವಿಶೇಷ ಸಭೆಯನ್ನು ಕರೆದು ಪಿ.ಓ.ಪಿ ಮತ್ತು ಹಾನಿಕಾರಕ ಬಣ್ಣಗಳ ಬಳಕೆಯ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇದ ಮಾಡಿದ್ದು ಅದರಂತೆ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿ ಸದರ ಗಣಪತಿ ಮೂರ್ತಿಗಳನ್ನು ಕೂಡ್ರಿಸಲು ಅವಕಾಶವಿಲ್ಲ, ಅಂತಹ ಪ್ರಕರಣಗಳು ಕಂಡುಬಂದಲ್ಲಿ ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ-1974 ರ ಕಲಂ. 15ಎ ಹಾಗೂ ಪರಿಸರ ಸಂರಕ್ಷಣಾಕಾಯ್ದೆ 1976 ರಗಳ ಅನ್ವಯ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಮತ್ತು ಮಣ್ಣಿನಿಂದ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಬಳಸಿ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಅಲ್ಲದೆ ಪುರಸಭೆಯಿಂದ ನಿರ್ಮಿಸಿದ ಕೃತಕ ಹೊಂಡಗಳಲ್ಲಿ ಗಣೇಶ ವಿಗೃಹಗಳನ್ನು ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಾಲ್ಗೊಂಡ ಮೂರ್ತಿ ತಯಾರಕರು ಮಾತನಾಡಿ ಪುರಸಭೆಯ ನಿರ್ದೇಶನದಂತೆ ನಾವು ಈಗ ಕೊಣ್ಣೂರ ಪಟ್ಟಣದಲ್ಲಿ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತಿದ್ದು, ಬೇರೆ ಸಮೀಪದ ಪಟ್ಟಣಗಳಾದ ಮೂಡಲಗಿ, ಖನಗಾಂವ, ಹುಕ್ಕೇರಿ ಹಾಗೂ ಚಿಕ್ಕೋಡಿ ಗಳಲ್ಲಿ ಪಿ.ಓ.ಪಿ ಮೂರ್ತಿಗಳನ್ನು ನೆರೆಯ ರಾಜ್ಯದಿಂದ ತಂದು ಮಾರಾಟ ಮಾಡುತ್ತಿದ್ದು ನಮ್ಮ ಮೂರ್ತಿಗಳಿಗೆ ಬೇಡಿಕೆ ಇಲ್ಲದಾಗಿದೆ. ಮೊದಲಿನಿಂದಲೂ ಕೊಣ್ಣೂರ ಪುರಸಭೆ ಗಣೇಶ ಮೂರ್ತಿಗಳ ತಯಾರಿಕೆಗೆ ಹೆಸರುವಾಸಿಯಾಗಿದ್ದು ಇದರಿಂದ ಸುಮಾರು 60-70 ಕುಟುಂಬಗಳ ಕುಟುಂಬ ನಿರ್ವಹಣೆ ನಿಂತಿದ್ದು, ಎಲ್ಲ ಕಡೆಗೆ ಪಿ.ಓ.ಪಿ ಮೂರ್ತಿಗಳ ಮಾರಾಟ ನಿಲ್ಲಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲ್ಲಿ ಪುರಸಭೆ ವ್ಯವಸ್ಥಾಪಕಿ ವ್ಹಿ.ಪಿ.ಯಮಕನಮರಡಿ, ಸಮುದಾಯ ಸಂಘಟನಾಧಿಕಾರಿ ಎಸ್.ಜೆ.ಕುರಣಿ, ಸಮುದಾಯ ಸಂಘಟಕ ಎಂ.ಎ.ಪೆದಣ್ಣವರ, ಕಿ.ಆ.ನೀರಿಕ್ಷಕ ಬಾಳನಾಯಕ ಕುಮರೇಶಿ, ಆರ್.ಕೆ.ಭವಾನೆ, ಮೂರ್ತಿಕಾರ ಸಂಘದ ಅಧ್ಯಕ್ಷ ಸುರೇಶ ಕುಂಬಾರ, ಗೋಪಾಲ ಕುಂಬಾರ ಸೇರಿದಂತೆ ಇತರರು ಇದ್ದರು.

Related posts: