ಘಟಪ್ರಭಾ:ವ್ಯಾಪಾರ ಮಳಿಗೆಗಳ ನಿಯಮ ಬಾಹಿರ ಟೆಂಡರ : ಕರವೇ ಸ್ವಾಭಿಮಾನ ಬಣ ಪ್ರತಿಭಟನೆ
ವ್ಯಾಪಾರ ಮಳಿಗೆಗಳ ನಿಯಮ ಬಾಹಿರ ಟೆಂಡರ : ಕರವೇ ಸ್ವಾಭಿಮಾನ ಬಣ ಪ್ರತಿಭಟನೆ
ಘಟಪ್ರಭಾ ಅ 18 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಕಾರ್ಯಾಲಯದ ಹತ್ತಿರ ವಿರುವ ಸರ್ಕಾರಿ ವ್ಯಾಪಾರ ಮಳಿಗೆಗಳನ್ನು ಅನಧಿಕೃತವಾಗಿ ನೀಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ತಾಲೂಕಾ ಅಧ್ಯಕ್ಷ ಸಂತೋಷ ಖಂಡ್ರಿ ಮತ್ತು ಜಿಲ್ಲಾಧ್ಯಕ್ಷೆ ಯಶೋಧಾ ಬಿರಡಿ ಅವರ ನೇತೃತ್ವದಲ್ಲಿ ಶನಿವಾರ ಮನವಿ ಸಲ್ಲಿಸಲಾಯಿತು.
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 15 ರಿಂದ 20 ವ್ಯಾಪಾರ ಮಳಿಗೆಗಳಿದ್ದು, ನಿಯಮಾನುಸಾರ ಟೇಂಡರ್ ಕರೆಯದೆ ಸದಸ್ಯರು ಹಾಗೂ ಆ ಮಳಿಗೆಗಳಲ್ಲಿ ಮೊದಲಿನಿಂದ ಇರುವಂತಹ ಫಲಾನುಭವಿಗಳನ್ನು ಅನಧಿಕೃತವಾಗಿ ಸಾರ್ವಜನಿಕರ ಗಮನಕ್ಕೆ ತರದೆ ನೀಡಲಾಗಿದೆ.
ಫಲಾನಭವಿಗಳಿಗೆ ಪ.ಪಂ ಮಳಿಗೆಗಳನ್ನು ಯಾವ ವರ್ಷದಲ್ಲಿ ಮತ್ತು ಎಷ್ಟು ವರ್ಷಗಳಕಾಲ ಮಂಜೂರ ಮಾಡಲಾಗಿದೆ ಎಂಬುದನ್ನು ಸಾರ್ವಜನಿಕ ಪಡಿಸಬೇಕು. ಮತ್ತು ವ್ಯಾಪಾರ ಮಳಿಗೆಗಳನ್ನು ನಿಯಮಾನುಸಾರ ಟೆಂಡರ್ ಪ್ರಕ್ರೀಯೆ ಮೂಲಕ ಅರ್ಹ ಫಲಾನುಭವಿಗಳಿಗೆ ನೀಡಬೇಕು. ಇಲ್ಲವಾದಲ್ಲಿ ಪಟ್ಟಣ ಪಂಚಾಯತಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ತಾಲೂಕಾ ಉಪಾಧ್ಯಕ್ಷ ಮಾರುತಿ ಚೌಕಶಿ, ಪ್ರಧಾನ ಕಾರ್ಯದರ್ಶಿ ಪ್ರವಿಣ ಧನಶೆಟ್ಟಿ, ಬಸವರಾಜ ಹುಬ್ಬಳ್ಳಿ, ಮಹಾಂತೇಶ ಗದಿಗೆನ್ನವರ, ಸಿದ್ದೇಶ್ವರ ಹುನೂರ, ಸೋಮನಾಥ ಮಟಗಾರ, ಶಿವುಕುಮಾರ ಮಠಪತಿ, ಪ್ರವೀನಕಾಮಾರ ಮೋಳಗೆ, ಸಚಿನ ಗುಗ್ಗರಿ, ಮಲ್ಲು ಹಟ್ಟಿ, ಮಂಜುನಾಥ ಮಾನೆ, ಅವಿನಾಶ ದೊಡ್ಡಮನಿ, ಅಖೀಲ ನಾಡೆ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.