RNI NO. KARKAN/2006/27779|Saturday, June 14, 2025
You are here: Home » breaking news » ಗೋಕಾಕ:ಬಂಡವಾಳಶಾಹಿ ಕಂಪನಿಗಳು ನಮ್ಮ ಭಾಷೆ, ಸಂಸ್ಕಂತಿಯನ್ನು ಒತ್ತುವರಿ ಮಾಡಿಕೊಂಡಿವೆ : ಪ್ರೋ| ಗಂಗಾಧರ ಮಳಗಿ

ಗೋಕಾಕ:ಬಂಡವಾಳಶಾಹಿ ಕಂಪನಿಗಳು ನಮ್ಮ ಭಾಷೆ, ಸಂಸ್ಕಂತಿಯನ್ನು ಒತ್ತುವರಿ ಮಾಡಿಕೊಂಡಿವೆ : ಪ್ರೋ| ಗಂಗಾಧರ ಮಳಗಿ 

ಬಂಡವಾಳಶಾಹಿ ಕಂಪನಿಗಳು ನಮ್ಮ ಭಾಷೆ, ಸಂಸ್ಕಂತಿಯನ್ನು ಒತ್ತುವರಿ ಮಾಡಿಕೊಂಡಿವೆ : ಪ್ರೋ| ಗಂಗಾಧರ ಮಳಗಿ

ಗೋಕಾಕ ಅ 14 : ಬಂಡವಾಳಶಾಹಿ ಕಂಪನಿಗಳು ನಮ್ಮ ಭೂಮಿಯನ್ನಷ್ಟೇ ಒತ್ತುವರಿ ಮಾಡಿಕೊಂಡಿಲ್ಲ ನಮ್ಮ ಭಾಷೆ, ಸಂಸ್ಕಂತಿಯನ್ನು ಒತ್ತುವರಿ ಮಾಡಿಕೊಂಡಿವೆ ಇದರಿಂದ ನಮ್ಮ ಭಾಷೆಗೆ ಕುತ್ತು ಬಂದೊದಗಿದೆ ಎಂದು ನಿವೃತ್ತ ಪ್ರಾಧ್ಯಾಪಕ, ಚಿಂತಕ ಪ್ರೋ| ಗಂಗಾಧರ ಮಳಗಿ ಹೇಳಿದರು.
ನಗರದಲ್ಲಿ ಇತ್ತೀಚಿಗೆ ಚುಟುಕು ಸಾಹಿತ್ಯ ಪರಿಷತ್ ಹಾಗೂ ಸಿರಿಗನ್ನಡ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ತಿಂಗಳ ಕವಿ ಸಮಯದ ಕವಿ ಕಾವ್ಯ ದರ್ಶನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕವಿಗಳಾದ ಅಶೋಕ ನೀಲಗಾರ ಹಾಗೂ ಶಬ್ಬೀರ ಡಾಂಗೆಯವರು ರಚಿಸಿದ ಕವನಗಳ ಕುರಿತು ಮಾತನಾಡಿ ಈ ಇಬ್ಬರ ಕವಿಗಳ ಕವನಗಳು ವಸ್ತು, ಭಾಷೆ ಕಾವ್ಯದ ಧೊರಣೆ ವ್ಯವಸ್ಥಿತವಾಗಿ ಸಮಗ್ರ ಕವನಗಳಲ್ಲಿ ಮೂಡಿ ಬಂದಿವೆ ಎಂದರು.
ಕಾರ್ಯಕ್ರಮವನ್ನು ಆನಂದ ಗೋಟಡಕಿ ಉದ್ಘಾಟಿಸಿ ಮಾತನಾಡಿ ಕಾವ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಜನರ ಭಾವನೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಕವಿಗಳು ಕವನವನ್ನು ರಚಿಸಬೇಕು ಎಂದು ಹೇಳಿದರು.
ವೇದಿಕೆ ಮೇಲೆ ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ರಜನಿ ಜೀರಗ್ಯಾಳ, ಕವಿಗಳಾದ ಅಶೋಕ ನೀಲಗಾರ, ಶಬ್ಬಿರ ಡಾಂಗೆ, ಹಿರಿಯ ಸಾಹಿತಿ ಮಹಾಲಿಂಗ ಮಂಗಿ, ಡಾ| ಸಿ.ಕೆ.ನಾವಲಗಿ, ಡಾ| ಎಸ್.ಬಿ.ಹೊಸಮನಿ, ಲಕ್ಷ್ಮಣ ಕಾಪಸಿ, ಈಶ್ವರಚಂದ್ರ ಬೆಟಗೇರಿ, ಸಿದ್ದು, ಡಾ| ಅಶೋಕ ಜೀರಗ್ಯಾಳ ಸೇರಿದಂತೆ ಇತರರು ಇದ್ದರು.
ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಮಹಾನಂದಾ ಗುಣಕಿ ಸ್ವಾಗತಿಸಿದರು. ವೈಶಾಲಿ ಭರಭರಿ ನಿರೂಪಿಸಿದರು. ಶೈಲಾ ಕೊಕ್ಕರಿ ವಂದಿಸಿದರು.

Related posts: