RNI NO. KARKAN/2006/27779|Monday, May 25, 2026
You are here: Home » breaking news » ಗೋಕಾಕ:ಡಾ|| ಪುರುಷೋತ್ತಮಾನಂದ ಮಹಾಸ್ವಾಮಿಗಳಿಗೆ ಸತ್ಕಾರ

ಗೋಕಾಕ:ಡಾ|| ಪುರುಷೋತ್ತಮಾನಂದ ಮಹಾಸ್ವಾಮಿಗಳಿಗೆ ಸತ್ಕಾರ 

ಡಾ|| ಪುರುಷೋತ್ತಮಾನಂದ ಮಹಾಸ್ವಾಮಿಗಳಿಗೆ ಸತ್ಕಾರ

ಗೋಕಾಕ ಜು 14 : ಹೊಸದುರ್ಗದ ಚೀನ್ಮೂಲಾದ್ರಿಮಠದ ಶ್ರೀ ಭಗೀರಥ ಪೀಠದ ಪೀಠಾಧಿಪತಿ ಡಾ|| ಪುರುಷೋತ್ತಮಾನಂದ ಮಹಾಸ್ವಾಮಿಗಳಿಗೆ ಇತ್ತಿಚೆಗೆ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ಇವರಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಹಿನ್ನಲೆಯಲ್ಲಿ ನಗರದ ಹೊರವಲಯದಲ್ಲಿರುವ ಭಗೀರಥ ಕಾಟನ್ ಜಿನ್ನಿಂಗ್ ಆಂಡ್ಯ್ ಪ್ರೆಸಿಂಗ್ ಪ್ಯಾಕ್ಟರಿಯಲ್ಲಿ ಇಲ್ಲಿಯ ಉಪ್ಪಾರ ಸಮಾಜ ಬಾಂಧವರು ಶನಿವಾರದಂದು ಶ್ರೀಗಳನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ರಾಜ್ಯಾಧ್ಯಕ್ಷ ಭರಮಣ್ಣ ಉಪ್ಪಾರ, ತಾಲೂಕಾಧ್ಯಕ್ಷ ರಾಮಣ್ಣ ತೋಳಿ, ನಗರ ಸಭೆ ಮಾಜಿ ಉಪಾಧ್ಯಕ್ಷ ವಿಠ್ಠಲ ಹೆಜ್ಜೆಗಾರ, ನ್ಯಾಯವಾದಿ ಕುಶಾಲ ಗುಡೆನ್ನವರ, ಸದಾಶಿವ ಗುದಗಗೋಳ, ಮಾಯಪ್ಪ ತಹಶೀಲದಾರ, ಯಲ್ಲಪ್ಪ ಹೆಜ್ಜೆಗಾರ, ಹಣಮಂತ ತಾಶೀಲದಾರ, ಶಂಕರ ಹೆಜ್ಜೆಗಾರ, ಮಲ್ಲಪ್ಪ ದಾಸಪ್ಪಗೋಳ ಸೇರಿದಂತೆ ಅನೇಕರು ಇದ್ದರು.

Related posts: