ಗೋಕಾಕ:ಅಂಧರ ಬಾಳಿಗೆ ಬೆಳಕನ್ನು ನೀಡುವ ಪವಿತ್ರ ಕಾರ್ಯಮಾಡಿ: ಡಿ.ದೇವರಾಜ
ಅಂಧರ ಬಾಳಿಗೆ ಬೆಳಕನ್ನು ನೀಡುವ ಪವಿತ್ರ ಕಾರ್ಯಮಾಡಿ: ಡಿ.ದೇವರಾಜ
ಗೋಕಾಕ ಜು 14 : ಅಂಧರ ಬಾಳಿಗೆ ಬೆಳಕನ್ನು ನೀಡುವ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇಲ್ಲಿಯ ಲಯನ್ಸ್ ಸಂಸ್ಥೆಯ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜ ಹೇಳಿದರು.
ಶನಿವಾರದಂದು ನಗರದ ಡಾ|| ಅಶೋಕ ಮುರಗೋಡ ಅವರ ಆಸ್ಪತ್ರೆಯಲ್ಲಿ ಇಲ್ಲಿಯ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಹುಬ್ಬಳ್ಳಿಯ ಎಮ್.ಎಮ್.ಜೋಶಿ ನೇತ್ರ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಆಶ್ರಯದಲ್ಲಿ ಜರುಗಿದ 25ನೇ ಮಾಸಿಕ ನೇತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಸಂಸ್ಥೆಯ ಸದಸ್ಯ ಜಿ.ಎಸ್.ಸಿದ್ದಾಪೂರಮಠ ಮಾತನಾಡುತ್ತಾ, ಕಳೆದ 25 ತಿಂಗಳಲ್ಲಿ 3 ಸಾವಿರ ಜನರ ಕಣ್ಣುಗಳ ತಪಾಸಣೆ ನಡೆಸಿ, 800 ಜನರ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇಂದಿನ ಶಿಬಿರದಲ್ಲಿ 50 ಜನರ ನೇತ್ರಗಳನ್ನು ತಪಾಸಣೆ ಮಾಡಲಾಗಿದ್ದು, ಅದರಲ್ಲಿ 18 ಜನರನ್ನು ಆಯ್ಕೆ ಮಾಡಿ ಸೋಮವಾರದಂದು ಹುಬ್ಬಳ್ಳಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ಡಾ|| ರಮೇಶ ಪಟಗುಂದಿ, ಡಾ|| ಅಶೋಕ ಮುರಗೋಡ, ಡಾ|| ಅಶೋಕ ಪಾಟೀಲ, ವಿಶ್ವನಾಥ ಬೆಲ್ಲದ, ಎಸ್.ಎಮ್.ಹತ್ತಿಕಟಗಿ, ಎಸ್.ಎಮ್.ಹಂಜಿ, ಲಯನೆಸ್ ಸಂಸ್ಥೆಯ ಜಯಾ ಬಾಫನಾ, ವಿಜಯಲಕ್ಷ್ಮೀ ಸಿದ್ದಾಪೂರಮಠ, ಡಾ|| ಗೀತಾ ಪಟಗುಂದಿ, ಹುಬ್ಬಳ್ಳಿಯ ಎಮ್.ಎಮ್.ಜೋಶಿ ನೇತ್ರ ಆಸ್ಪತ್ರೆಯ ಡಾ||ನೇಹಾ, ಡಾ|| ಸಂಜು ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.