RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ: ಕರ್ತವ್ಯಲೋಪ ವೆಸಗಿದ ನಗರ ಸಭೆ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ಕರವೇ ಆಗ್ರಹ

ಗೋಕಾಕ: ಕರ್ತವ್ಯಲೋಪ ವೆಸಗಿದ ನಗರ ಸಭೆ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ಕರವೇ ಆಗ್ರಹ 

ಕರ್ತವ್ಯಲೋಪ ವೆಸಗಿದ ನಗರ ಸಭೆ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ಕರವೇ ಆಗ್ರಹ

ಗೋಕಾಕ ಜು 4 : ನಗರ ಸಭೆ ಅಧಿಕಾರಿಗಳ ನಿರ್ಲಕ್ಷದಿಂದ ವಾರ್ಡ ನಂ. 22 ಅಂಬೇಡ್ಕರ ನಗರದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕು ಪದೇ ಪದೇ ಓವರಪುಲ್ಲಾಗಿ ನೀರು ಗಟಾರು ಪಾಲಾಗುತ್ತಿರುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತ್ರತ್ವದಲ್ಲಿ ನೀರು ಸಂಗ್ರಹಣಾ ಟ್ಯಾಂಕು ಸ್ಥಳದಲ್ಲಿ ಧರಣಿ ನಡೆಸಿ ಕರ್ತವ್ಯಲೋಪ ವೆಸಗಿದ ಸಿಬ್ಬಂದಿಗಳನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.
ಬುಧವಾರ ಮಧ್ಯಾಹ್ನ ನಗರದ ಅಂಬೇಡ್ಕರ ನಗರದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕ ಹತ್ತಿರ ಸೇರಿದ ಕರವೇ ಕಾರ್ಯಕರ್ತರು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ವಾರ್ಡ ನಂ.22 ರ ಪಾಯಸಾಗರ ಶಾಲೆಯ ಹಿಂದೆ ಇರುವ ಬೃಹತ್‍ಪ್ರಮಾಣದ ನೀರು ಸಂಗ್ರಹಣಾ ಟ್ಯಾಂಕು ಓವರಪುಲ್ಲಾಗಿ ಬುಧುವಾರ ಮುಂಜಾನೆ 3.00 ಗಂಟೆಯಿಂದ 6.00 ಗಂಟೆಯವರೆಗೆ ನೀರು ಗಟಾರು ಪಾಲಾಗಿ ಅಂಬೇಡ್ಕರ ನಗರದ ಮುಖ್ಯ ರಸ್ತೆಯನ್ನು ಹಾಳು ಮಾಡಿದೆ ಎಂದು ಆರೋಪಿಸಿದ ಕಾರ್ಯಕರ್ತರು ಇದಕ್ಕೆ ಕಾರಣರಾದ ಜೈನ ಕಂಪನಿಯ ಸಿಬ್ಬಂದಿ 24*7 ನೀರಿನ ನಿರ್ವಹಣೆ ನೋಡಿಕೊಳ್ಳುತ್ತಿರುವ ಬಸವರಾಜ ಮಠಪತಿ, ಬಸು ಕಳ್ಳಿಮನಿ ಸೇರಿದಂತೆ ಇತರ ನಗರಸಭೆ ಸಿಬ್ಬಂದಿಗಳನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಬೇಕೆಂದು ಧರಣಿ ನಿರತರು ಪಟ್ಟು ಹಿಡಿದರು. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪ್ರಭಾರಿ ಪೌರಾಯುಕ್ತ ಎಂ.ಎಚ್.ಅತ್ತಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್.ತಡಸಲೂರ ಅವರು ನೀರು ಪೋಲಾಗುವುದರಿಂದ ವಾರ್ಡ ನಂ.22 ರ ಸಾರ್ವಜನಿಕರು ಪಡುತ್ತಿರುವ ತೊಂದರೆಗಳನ್ನು ಅವಲೋಕಿಸಿ ಟ್ಯಾಂಕು ಓವರಪುಲ್ಲಾಗಿ ಹಾಳಾಗಿರುವ ರಸ್ತೆ ಮತ್ತು ನೀರಿನ ರಭಸಕ್ಕೆ ಬಿದ್ದ ತಗ್ಗು ಗುಂಡಿಗಳನ್ನು ತಕ್ಷಣದಲ್ಲಿ ಮುಚ್ಚಿ ಬಸವರಾಜ ಮಠಪತಿ, ಬಸು ಕಳ್ಳಿಮನಿ ಸೇರಿದಂತೆ ಕರ್ತವ್ಯ ಲೋಪ ವೆಸಗಿ ನೀರು ಪೋಲು ಮಾಡಿದ ಇನ್ನಿತರ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ ಬರುವ ದಿನಗಳಲ್ಲಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದೆಂದು ಭರವಸೆ ನೀಡಿದ ಪರಿಣಾಮ ಕಾರ್ಯಕರ್ತರು ಒಂದು ವಾರದೊಳಗೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸದಿದ್ದಲ್ಲಿ ನಗರಸಭೆ ಎದುರು ಧರಣಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿ ಧರಣಿ ಹಿಂತಗೆದುಕೊಂಡರು

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ಹನೀಪಸಾಬ ಸನದಿ, ರಮೇಶ ನಾಕಾ, ಭೀಮಾಶಂಕರ ಪುಟಾಣಿ, ಪರಸ ಸುಣಗಾರ, ರಘು ರಾಯಬಾಗಿ, ಮುಗುಟ ಪೈಲವಾನ , ನಿಜಾಮ ನಧಾಪ , ರಮೇಶ ಬಿ.ಕೆ. ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: