ಬೆಳಗಾವಿ:ನಿಫಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮ : ಡಾ. ನರಹಟ್ಟಿ
ನಿಫಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮ : ಡಾ. ನರಹಟ್ಟಿ
ಬೆಳಗಾವಿ ಜೂ 3 : ಜಿಲ್ಲೆಯಲ್ಲಿ ನಿಫಾ ವೈರಸ್ ಪತ್ತೆ ವಂದತಿ ಪ್ರಕರಣದ ಬಗ್ಗೆ ಡಿಎಚ್ಓ ಸ್ವಷ್ಟನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೆ ವೈರಸ್ ಪತ್ತೆಯಾಗಿಲ್ಲ ಈ ರೀತಿ ಸುಳ್ಳು (ಸುದ್ದಿ) ಮಾಹಿತಿ ನೀಡಿರುವ ಕಾಲೇಜು ಪ್ರಾಂಶುಪಾಲರ ವಿರುದ್ಧ kpme ಕಾಯ್ದೆಯಡಿ ನೋಟಿಸಿ ನೀಡುವುದಾಗಿ ಡಿಎಚ್ಓ ಡಾ.ಅಪ್ಪಾಸಾಹೇಬ ನರಹಟ್ಟಿ ತಿಳಿಸಿದ್ದಾರೆ
ಶಿವ ಬಸವ ಜ್ಯೋತಿ ಹೋಮಿಯೋ ಕೇರ್ ಮೆಡಿಕಲ್ ಕಾಲೇಜ್ ಪ್ರಾಂಶುಪಾಲರ ಹೆಸರಿನಲ್ಲಿ ವದಂತಿ ಹರಿದಾಡುತ್ತಿದೆ. ಜಿಲ್ಲೆಯಲ್ಲಿ 4 ಜನರಲ್ಲಿ ನಿಫಾ ಪತ್ತೆಯಾಗಿದೆ. ನಾಲ್ವರು ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಪತ್ರ ವಾಟ್ಸಪ್ನಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಅಷ್ಟೇ ಅಲ್ಲದೆ ಕೇರಳ ಮೂಲದ ವಿದ್ಯಾರ್ಥಿಗಳಿಗೆ ತವರಿಗೆ ಹೋಗಬೇಡಿ ಎಂದೂ ಸುಳ್ಳು ಸುದ್ದಿ ಹರಿಬಿಡಲಾಗಿದೆ.
ಈ ಬಗ್ಗೆ ಎಚ್ಚೆತ್ತುಕೊಂಡಿರುವ ಡಿಹೆಚ್ಓ, ವದಂತಿ ಹಬ್ಬಿಸುವವರಿಗೆ ನೋಟಿಸ್ ನೀಡುವುದಾಗಿ ತಿಳಿಸಿದ್ದಾರೆ.