ಗೋಕಾಕ:ಚುನಾವಣೆ ವಿಕ್ಟರಿ ಸ್ಪರ್ಧೆಯ ಅದೃಷ್ಟಶಾಲಿ ವಿಜೇತನಿಗೆ ಬಹುಮಾನ ವಿತರಣೆ

ಚುನಾವಣೆ ವಿಕ್ಟರಿ ಸ್ಪರ್ಧೆಯ ಅದೃಷ್ಟಶಾಲಿ ವಿಜೇತನಿಗೆ ಬಹುಮಾನ ವಿತರಣೆ
ಬೆಟಗೇರಿ ಮೇ 24 : ಕನ್ನಡ ನಾಡಿನ ಮಾಧ್ಯಮ ಕ್ಷೇತ್ರದಲ್ಲಿ ವಿಜಯವಾಣಿ ಕನ್ನಡ ದಿನ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಜ್ ಚಾನಲ್ ಅತ್ಯಂತ ಕಡಿಮೆ ಅವಧಿಯಲ್ಲಿ ಪತ್ರಿಕಾ ಮತ್ತು ಪ್ರಸಾರ ಮಾಧ್ಯಮ ವಲಯದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸುತ್ತಾ ನಾಡಿನ ಅಸಂಖ್ಯಾತ ಓದುಗ-ನೊಡುಗರನ್ನು ಹೊಂದಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವರದಿಗಾರ ಅಡಿವೇಶ ಮುಧೋಳ ಅವರ ಪತ್ರಿಕಾ ಕಾರ್ಯಾಲಯದಲ್ಲಿ ಗುರುವಾರ ಮೇ.24 ರಂದು ನಡೆದ ವಿಜಯವಾಣಿ ಕನ್ನಡ ದಿನ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಜ್ ಚಾನಲ್ ಆಯೋಜಿಸಿದ್ದ ಚುನಾವಣೆ ವಿಕ್ಟರಿ ಸ್ಪರ್ಧೆಯ ಅದೃಷ್ಟಶಾಲಿ ವಿಜೇತ ಸ್ಥಳೀಯ ಬಸವರಾಜ ಪಣದಿ ಅವರಿಗೆ ಟಿ ಶರ್ಟ್ ವಿತರಣೆ ಮಾಡಿ ಮಾತನಾಡಿದ ಅವರು, ವಿಜಯವಾಣಿ ಪತ್ರಿಕೆ ವಸ್ತುನಿಷ್ಠ ವರದಿ, ಅಂಕಣಗಳ ಮೂಲಕ ಸಮಗ್ರ ಮಾಹಿತಿ, ಸಂಗ್ರಹ ಯೋಗ್ಯ ಪುರವಣಿ ಸೇರಿದಂತೆ ಹಲವಾರು ವಿಶ್ಲೇಷಾತ್ಮಕ ಮಾಹಿತಿಯನ್ನು ವಿಜಯವಾಣಿ ಪತ್ರಿಕೆ ನಿತ್ಯ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸ್ಥಳೀಯ ಕಲ್ಲೊಳ್ಳಿ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ, ಬೆಟಗೇರಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಈರಣ್ಣ ದೇಯಣ್ಣವರ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿಜಯವಾಣಿ ಕನ್ನಡ ದಿನ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಜ್ ಚಾನಲ್ ಹೊಸ ಹೊಸ ಆಯಾಮಗಳೊಂದಿಗೆ ಓದುಗರನ್ನು, ಟಿವಿ ನೋಡುಗರನ್ನು ಸೃಷ್ಠಿಸುತ್ತಿದೆ ಎಂದರು.
ಮಹಾದೇವ ಕೋಣಿ, ಮುತ್ತೆಪ್ಪ ದೇಯಣ್ಣವರ, ಮಲ್ಲಪ್ಪ ಪೇದಣ್ಣವರ, ಬಸನಗೌಡ ಪಾಟೀಲ( ಬಗರನಾಳ), ಆನಂದ ತಳವಾರ, ಮಹಾಂತೇಶ ಪಟ್ಟೇದ, ನಾಗರಾಜ ಚಂದರಗಿ, ವಿಜಯವಾಣಿ ಪತ್ರಿಕೆ ಸ್ಥಳೀಯ ವರದಿಗಾರ ಅಡಿವೇಶ ಮುಧೋಳ, ಪತ್ರಿಕೆ ಏಜೆಂಟ ಶೋಭಾ ಮುಧೋಳ ಸೇರಿದಂತೆ ಪತ್ರಿಕೆ ಓದುಗ ಮಿತ್ರರರು, ಇತರರು ಇದ್ದರು.