ಗೋಕಾಕ:ಹಣ ಹಂಚಿಕೆ ಆರೋಪ : ಸಚಿವ ರಮೇಶ ವಿರುದ್ಧ ಪ್ರಕರಣ ದಾಖಲು

ಹಣ ಹಂಚಿಕೆ ಆರೋಪ : ಸಚಿವ ರಮೇಶ ವಿರುದ್ಧ ಪ್ರಕರಣ ದಾಖಲು
ಗೋಕಾಕ ಮೇ 9 : ಮತದಾರರಿಗೆ ಹಣ ಹಂಚಿದ ಆರೋಪದಲ್ಲಿ ಗೋಕಾಕ ಮತಕ್ಷೆತ್ರದ ಕಾಂಗ್ರೇಸ ಅಭ್ಯರ್ಥಿ ಜಿಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮೇಲೆ ಪ್ರಕರಣ ದಾಖಲಾಗಿದೆ .
ಹಿಂದಿನ ರವಿವಾರ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಪ್ರಚಾರಾರ್ಥ ತೆರಳಿದ್ದ ಸಮಯದಲ್ಲಿ ಆರತಿ ತಟ್ಟೆಯಲ್ಲಿ ಹಣಕಾಕಿದ ಬಗ್ಗೆ ಸಾಕ್ಷೀ ಸಮೇತ ಬಿಜೆಪಿ ಕಾರ್ಯಕರರ್ತರು ಮೋನ್ನೆಯಷ್ಟೇ ಪ್ರತಿಭಟನೆ ನಡೆಸಿ ಪ್ರಕರಣ ದಾಖಲಿಸುವಂತೆ ತಹಶೀಲ್ದಾರ್ ಮತ್ತು ಚುನಾವಣಾ ಅಧಿಕಾರಿಗಳನ್ನು ಒತ್ತಾಯಿಸಿದ್ದರು .
ಇದಕ್ಕೆ ತಕ್ಷಣದಲ್ಲಿ ಸ್ವಂದಿಸುವುದಾಗಿ ಚುನಾವಣಾಧಿಕಾರಿ ದಿನೇಶಕುಮಾರ ಭರವಸೆ ನೀಡಿದ್ದರು . ನಿನ್ನೆ ಸಂಜೆಯೇ ಸಚಿವ ರಮೇಶ ಜಾರಕಿಹೊಳಿ ಅವರ ಮೇಲೆ ನೀತಿಸಂಹಿತೆ ಉಲ್ಲಂಘಿಸಿ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕ್ಂಡು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಕ್ರಮ ಕೈ ಕೊಂಡಿದ್ದಾರೆ ಎಂದು ತಿಳಿದುಬಂದಿದೆ