ಬೆಳಗಾವಿ:ಮೂಢನಂಬಿಕೆ ವಿರೋಧಿ ನಾಯಕನಿಂದ ಇಂದು ನಾಮಪತ್ರ ಸಲ್ಲಿಕೆ : ಮಗಳು ಪ್ರೀಯಾಂಕಾ ಸಾಥ್

ಮೂಢನಂಬಿಕೆ ವಿರೋಧಿ ನಾಯಕನಿಂದ ಇಂದು ನಾಮಪತ್ರ ಸಲ್ಲಿಕೆ : ಮಗಳು ಪ್ರೀಯಾಂಕಾ ಸಾಥ್
ಬೆಳಗಾವಿ ಏ 24 : ಮೂಢನಂಬಿಕೆ ವಿರೋಧಿಸಿ ರಾಜ್ಯದ್ಯಂತ ಹೋರಾಟ ನಡೆಯಿಸಿ ಜನಪ್ರಿಯ ವಾಗುತ್ತಿರುವ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಕೊನೆಯ ದಿನದಂದು ನಾಮಪತ್ರ ಸಲ್ಲಿಸಿದ್ದಾರೆ . ಈ ಭಾರಿ ಶಾಸಕ ಸತೀಶ ಅವರಿಗೆ ಮಗಳು ಪ್ರೀಯಾಂಕಾ ಸಾಥ್ ನೀಡಿದ್ದು ವಿಶೇಷವಾಗಿತ್ತು .
ಕೊನೆದಿನ ಕೊನೆಯ ಘಳಿಗೆಯಲ್ಲಿ ಕೇವಲ , ಕೆಲವೇ ಕೆಲವು ಬೆಂಬಲಿಗರೊಂದಿಗೆ ಹುಕ್ಕೇರಿಯ ತಾಲೂಕಾ ಪಂಚಾಯತ ಕಛೇರಿಗೆ ಆಗಮಿಸಿದ ಶಾಸಕ ಸತೀಶ ಚುನಾವಣಾಧಿಕಾರಿ ಕವಿತಾ ಯೋಗಪ್ಪನ್ನವರ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು
ಈ ಸಂದರ್ಭದಲ್ಲಿ ಪಾರಸಗೌಡ ಪಾಟೀಲ , ರಾಮಣ್ಣಾ ಗುಳ್ಳಿ , ಅಬ್ದುಲಗಣಿ ದರ್ಗಾ , ಈರಣ್ಣಾ ಬಿಸಿರೋಟ್ಟಿ ಸೇರಿದಂತೆ ಇತರರು ಇದ್ದರು .
ಜೋತಿಷ್ಯ ಮತ್ತು ಜೋತಿಷ್ಯಿಗಳನ್ನು ಬಲವಾಗಿ ವಿರೋಧಿಸುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಲು ರಾಹು ಕಾಲ ಆಯ್ದುಕೊಂಡು ನಾಮಪತ್ರ ಸಲ್ಲಿಸಿ ಮೌಢ್ಯಕ್ಕೆ ಮತ್ತೋಮ್ಮೆ ಸೆಡ್ಡುಹೊಡೆದರು , ಆದರೆ ರಾಹುಕಾಲಕ್ಕೆ ಮೊರೆ ಹೊಗುವ ಭರದಲ್ಲಿ ಸತೀಶರು ಜೋತಿಷ್ಯಗಳನ್ನು ಕೇಳಿಯೇ ಅಥವಾ ಕೇಳಿಸಿಯೇ ರಾಹುಕಾಲದ ಅವಧಿ ಪಡೆದ ವಿಷಯ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು , ಮೂಢನಂಬಿಕೆ ವಿರೋಧಿಸವವರು ಜೋತಿಷ್ಯ ಶಾಸ್ತ್ರಕ್ಕೆ ಮೊರೆ ಹೋಗಿ ನಾಮಪತ್ರ ಸಲ್ಲಿಸಿದ್ದು ಎಷ್ಟು ಸರಿ ಎಂಬ ಯಕ್ಷಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರದಾಡುತ್ತಿದೆ