RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ: 8 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ

ಗೋಕಾಕ: 8 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ 

ಸಮೀಪದ ಬಗರನಾಳ ಗ್ರಾಮದÀ ಶಿಕ್ಷಣ ಪ್ರೇಮಿ, ಅಕ್ಕಿಸಾಗರ ಗ್ರಾಮ ಪಂಚಾಯತ ಕಾರ್ಯದರ್ಶಿ ಬಸಪ್ಪ ಬಂಕಾಪೂರ ಅವರು ಮಧ್ಯಾಹ್ನ ಬಿಸಿಯೂಟ ಮಾಡಲು ಶಾಲಾ ಮಕ್ಕಳಿಗೆ 10500 ರೂ (ಹತ್ತು ಸಾವಿರದ ಐನೂರು ರೂಪಾಯಿ) ಕಿಮ್ಮತ್ತಿನ 181 ಊಟದ ತಟ್ಟೆಗಳನ್ನು ದೇಣಿಗೆ ನೀಡಿದರು.

8 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ

ಗೋಕಾಕ : (ಬೆಟಗೇರಿ) ಮಾ 22 : ಸಮೀಪದ ಬಗರನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಸೋಮವಾರ ಮಾ.19 ರಂದು ಸಂಜೆ 5 ಗಂಟೆಗೆ ನಡೆಯಿತು.
ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ರಾಮಪ್ಪ ತಳವಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಟಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಟಿ. ಪುಂಜಿ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಗ್ರಾಮ ಪಂಚಾಯತಿ ಸದಸ್ಯ ಬಸನಗೌಡ ಪಾಟೀಲ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ 8 ನೇ ತರಗತಿಯ ಮೂವರು ವಿದ್ಯಾರ್ಥಿಗಳಿಗೆ ಪ್ರಥಮ 300 ರೂ, ದ್ವಿತೀಯ 200ರೂ ಹಾಗೂ ತೃತೀಯ ಬಹುಮಾನ 100 ರೂ ನಗದು ಬಹುಮಾನ ನೀಡಿದರು.
ಗ್ರಾಮದ ಶಿಕ್ಷಣ ಪ್ರೇಮಿ, ಅಕ್ಕಿಸಾಗರ ಗ್ರಾಮ ಪಂಚಾಯತ ಕಾರ್ಯದರ್ಶಿ ಬಸಪ್ಪ ಬಂಕಾಪೂರ ಅವರು ಮಧ್ಯಾಹ್ನ ಬಿಸಿಯೂಟ ಮಾಡಲು ಶಾಲಾ ಮಕ್ಕಳಿಗೆ 10500 ರೂ (ಹತ್ತು ಸಾವಿರದ ಐನೂರು ರೂಪಾಯಿ) ಕಿಮ್ಮತ್ತಿನ 181 ಊಟದ ತಟ್ಟೆಗಳನ್ನು ದೇಣಿಗೆ ನೀಡಿದರು. ಊಟದ ತಟ್ಟೆ ನೀಡಿದ ದಾನಿ ಬಸಪ್ಪ ಬಂಕಾಪೂರ ಅವರು ಶಾಲೆಯ ವತಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅತಿಥಿಗಳನ್ನು ಶಾಲು ಹೊದಿಸಿ ಸತ್ಕರಿಸಲಾಯಿತು. ವಾರ್ಷಿಕ ಕ್ರೀಡಾ ಕೂಟ ಸೇರಿದಂತೆ ವಿವಿಧ ವಲಯದಲ್ಲಿ ಸಾಧನೆಗೈದ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಬಳಿಕ ಶಾಲಾ ಮಕ್ಕಳಿಂದ ಭಾಷಣ, ಸಾಂಸ್ಕøತೀಕ ಹಲವಾರು ಮನರಂಜನೆಯ ಕಾರ್ಯಕ್ರಮಗಳು ನಡೆದವು.
ಗ್ರಾಪಂ ಸದಸ್ಯ ಸುಭಾಸ ಹಾವಾಡಿ, ಭಿಮಪ್ಪ ಹರಿಜನ, ರಾಮಪ್ಪ ವೆಂಕಟಾಪೂರ, ಯಮನಪ್ಪ ಹಾವಾಡಿ, ರಾಮಪ್ಪ ಕುಮೋಜಿ, ಜಡೆಪ್ಪ ಸಾತಗುನಿ, ಮಹಾದೇವಪ್ಪ ವೆಂಕಟಾಪೂರ, ವೆಂಕಟ ಹಾವಾಡಿ, ಶಿವಪ್ಪ ಕತ್ತಿ, ವೀರಭದ್ರ ಶಿವಾಪೂರ, ಭೀಮಶೆಪ್ಪ ಈಳಿಗೇರ, ರಮೇಶ ಅವರಾದಿ, ಸಂಗನಗೌಡ ಪಾಟೀಲ, ಶಿವನಗೌಡ ಪಾಟೀಲ, ರೇಣುಕಾ ಕೊಪ್ಪದ, ಸುನಂದಾ ಕಂಬಾರ, ಸುರೇಖಾ ಕತ್ತಿ, ರಮೇಶ ಕತ್ತಿ, ಡಿ ಎಮ್ ನಾಗನೂರ, ಶಿಕ್ಷಕಿ ಕುಮಾರಿ ಮಂಜುಳಾ ಮತ್ತಿತರರು ಇದ್ದರು,
ಮುಖ್ಯಶಿಕ್ಷಕ ಆರ್.ಎಸ್.ಕಲ್ಲಪ್ಪನವರ ಸ್ವಾಗತಿಸಿದರು. ಪ್ರಕಾಶ ಕುರಬೇಟ ಕಾರ್ಯಕ್ರಮ ನಿರೂಪಿಸಿದರು. ವೆಂಕಣ್ಣ ಗುದಗಾಪೂರ ವರದಿ ಮಂಡಿಸಿದರು. ಶಿವಾನಂದ ಕೋತ ಕೊನೆಗೆ ವಂದಿಸಿದರು.

Related posts: