ಗೋಕಾಕ:ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ: ಡಿವೈಎಸ್ಪಿ ಪ್ರಭು ಡಿ.ಟಿ.
ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ: ಡಿವೈಎಸ್ಪಿ ಪ್ರಭು ಡಿ.ಟಿ.
ಗೋಕಾಕ ಫೆ, 2 ;- ಕೋಮುವಾದ ಮತ್ತು ಶಾಂತಿ ಸುವ್ಯವಸ್ಥೆ ಹದಗೆಡಿಸುವ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಕೊಳ್ಳುವ ಎಚ್ಚರಿಕೆಯನ್ನು ಗೋಕಾಕ ಡಿವೈಎಸ್ಪಿ ಪ್ರಭು ಡಿ.ಟಿ. ಅವರು ನೀಡಿದರು.
ಅವರು, ಶುಕ್ರವಾರದಂದು ಬೆಳಗಾವಿ ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ನಗರದ ಗ್ರಾಮೀಣ ಪೋಲೀಸ ಠಾಣೆ ಆವರಣದಲ್ಲಿ ರೌಡಿಶೀಟ ಹೊಂದಿದವರ ಪರೇಡದಲ್ಲಿ ಮಾತನಾಡುತ್ತಿದ್ದರು.
ಕೋಮು ಸೌಹಾರ್ದತೆಗೆ ಗೋಕಾಕ ನಗರ ಹೆಸರುವಾಸಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಯಾರಾದರೂ ಶಾಂತಿ ಸುವ್ಯವಸ್ಥೆ ಹದಗೆಡಿಸಲು ಯತ್ನಿಸಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳಲಾಗುವದು. ಸಮಾಜದಲ್ಲಿ ಒಳ್ಳೆಯವರಾಗಿ ಜೀವನ ಸಾಗಿಸಲು ಪೋಲೀಸ ಇಲಾಖೆ ಎಲ್ಲ ಸಹಕಾರ ನೀಡುವದು ಆದರೆ ತಮ್ಮ ಹಳೇ ಚಾಲಿ ಮುಂದುವರಿಸಿ ಅಪರಾಧ ಕೃತ್ಯ ಎಸಗಿದರೆ ಅವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೋಕಾಕ ಸಿಪಿಐ ಎಮ್.ಎಸ್.ತಾನಪ್ಪಗೋಳ, ನಗರ ಠಾಣೆ ಪಿಎಸ್ಐ ಆರ್.ಎಸ್.ಜಾನಾರ, ಗ್ರಾಮೀಣ ಠಾಣೆ ಪಿಎಸ್ಐ ಗಣಪತಿ ಕೊಂಗನೊಳ್ಳಿ ಇದ್ದರು.