ಘಟಪ್ರಭಾ:ಸುಕ್ಷೇತ್ರ ಹುಣಶ್ಯಾಳದ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಸತ್ಸಂಗ, ತೊಟ್ಟಿಲೋತ್ಸವ, ಮಹಾತ್ಮರ ಭವ್ಯ ಸ್ವಾಗತ ಕಾರ್ಯಕ್ರಮ
ಸುಕ್ಷೇತ್ರ ಹುಣಶ್ಯಾಳದ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ
ಸತ್ಸಂಗ, ತೊಟ್ಟಿಲೋತ್ಸವ, ಮಹಾತ್ಮರ ಭವ್ಯ ಸ್ವಾಗತ ಕಾರ್ಯಕ್ರಮ
ಘಟಪ್ರಭಾ ಡಿ 31: ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಜ. 1 ರಿಂದ 3ರವರೆಗೆ 19ನೇ ಸತ್ಸಂಗ ಸಮ್ಮೇಳನ, ಶ್ರೀ ಸಿದ್ದಲಿಂಗೇಶ್ವರ ರಥೋತ್ಸವದ ಕಳಸಾರೋಹಣ ಶ್ರೀ ಸಿದ್ದಲಿಂಗ ಯತಿರಾಜರ ಶ್ರೀ ಶಾಂಭವಿ ಮಾತೆಯ ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗಳ ರುದ್ರಾಭಿಷೇಕ, ಶ್ರೀಶೈಲ ಜಗದ್ಗುರು ಶ್ರೀ ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ, ಡಾ| ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಜಿ ಮುಗಳಖೋಡ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ಸದಾನಂದ ಸ್ವಾಮಿಜಿ ಸೇರಿದಂತೆ ಸರ್ವ ಮಹಾತ್ಮರ ಭವ್ಯಸ್ವಾಗತ ಮೆರವಣಿಗೆ, ಓಂಕಾರ ಧ್ವಜಾರೋಹಣ ನಂತರ “ಸಾಂಸ್ಕøತಿಕ ಸಿರಿ” ಕಾರ್ಯಕ್ರಮ ಜರುಗಲಿದೆ.
ಸತ್ಸಂಗ ಸಮ್ಮೇಳನದ ಉದ್ಘಾಟನೆ ನೆರವೇರಲಿದೆ. ಶ್ರೀ ಸಿದ್ಧಲಿಂಗ ಯತಿರಾಜರ ತೊಟ್ಟಿಲೋತ್ಸವ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಯವರ ಗುರುಪಟ್ಟಾಧಿಕಾರ ರಜತ ಮಹೋತ್ಸವ ಸವಿನೆನಪಿಗಾಗಿ ತುಲಾಭಾರ ಹಾಗೂ ಪ್ರಶಸ್ತಿ ಪ್ರಧಾನ ಜರುಗಲಿದೆ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ, ಬೈಲಹೊಂಗಲ ಶಿವಾನಂದಮಠದ ಮಹಾದೇವ ಸರಸ್ವತಿ ಸ್ವಾಮಿಜಿ, ವಿಜಯಪುರದ ಮದಭಿನವ ಶಿವಪುತ್ರ ಸ್ವಾಮಿಜಿ, ನಿಡಸೋಸಿಯ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಜಿ, ಪ್ರಭುನಿಲಕಂಠ ಮಹಾಸ್ವಾಮಿಜಿ, ಅಭಿನವ ಶಿವಾನಂದ ಸ್ವಾಮಿಜಿ, ಮುರುಘರಾಜೇಂದ್ರ ಸ್ವಾಮಿಜಿ ಗೋಕಾಕ, ಚನ್ನಬಸವದೇಶಿಕೇಂದ್ರ ಸ್ವಾಮಿಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ರೇವಣಸಿದ್ದ ಶಿವಾಚಾರ್ಯ ಸ್ವಾಮಿಜಿ, ಸಿದ್ಧರಾಮ ಸ್ವಾಮಿಜಿ, ಗುರುನಾಥ ಶಾಸ್ತ್ರೀಗಳು, ಶಿವಪುತ್ರ ಅವಧೂತರು, ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಜಿ, ಸದಾನಂದ ಸ್ವಾಮಿಜಿ ಮಂಟೂರ, ಡಾ|ಅದೃಶ್ಯ ದೇವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರಿಶಂಕರಿ ಉಪಸ್ಥಿತರಿರುವರು. ನಂತರ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಸಚಿವರು, ಸಂಸದರು, ಶಾಸಕರು ಸೇರಿದಂತೆ ವಿವಿಧ ಗಣ್ಯರಿಗೆ, ಅಧಿಕಾರಿಗಳಿಗೆ ಸನ್ಮಾನ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ನಿಜಗುಣ ದೇವರು ತಿಳಿಸಿದ್ದಾರೆ.