ಖಾನಾಪುರ:ಸಾಲಭಾದೆ ತಾಳಲಾರದೆ ನೇಣುಬಿಗಿದುಕೊಂಡು ರೈತ ಆತ್ಮಹತ್ಯೆ
ಸಾಲಭಾದೆ ತಾಳಲಾರದೆ ನೇಣುಬಿಗಿದುಕೊಂಡು ರೈತ ಆತ್ಮಹತ್ಯೆ
ಖಾನಾಪುರ ಡಿ 20: ತಾಲೂಕಿನ ಲಿಂಗನಮಠ ಗ್ರಾಮದ ಹೊರವಲಯದಲ್ಲಿ ಸಾಲಭಾದ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂಗಳವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ರೈತ ಹೊಲಕ್ಕೆ ಹೋದವನು ಸಂಜೆಯಾದರು ಮರಳಿ ಮನೆಗೆ ಬಂದಿಲ್ಲ.
ಪ್ರಭುಲಿಂಗಯ್ಯಾ ಈರಯ್ಯಾ ಚರಂತಿಮಠ(೪೭).
ಮೂಲತಃ ಲಿಂಗನಮಠ ಗ್ರಾಮದವನಾದ ಇವನಿಗೆ ಒರ್ವ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒರ್ವ ಪುತ್ರ ಇದ್ದಾರೆ.
ಕೆವಿಜಿ ಬ್ಯಾಂಕ್- 2ಲಕ್ಷ,
ಪಿಕೆಪಿಎಸ್- 25ಸಾವಿರ
ಕೈಗಡ- 1ಲಕ್ಷ
ಒಟ್ಟು- 325000/-
ಸಾಲವಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸತತವಾಗಿ ಬರಗಾಲ ಆವರಿಸುವುದರಿಂದ ಹೊಲದಲ್ಲಿ ಏನು ಬೆಳೆ ಬಾರದೆ ಇರುವುದರಿಂದ ಸಾಲಕ್ಕೆ ಹೆದರಿ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಜಾರಿದ್ದಾರೆ.
ಜೋತೆಗೆ ಕಳೆದೆರಡು ವರ್ಷಗಳಿಂದ ಜಾರಿ ಬಿದ್ದು ಕೈ, ಕಾಲಿಗೆ ಪೆಟ್ಟು ಬಿದ್ದಿದ್ದರಿಂದ ಆಪರೇಷನ್ ಕೂಡ ಆಗಿತ್ತು, ಹೀಗಾಗಿ ಹೆಚ್ಚಿನ ಸಾಲವಾಗಿದೆ ತಿರಿಸಲು ಆಗದೆ ಇದ್ದಾಗ ಭಯಭಿತರಾಗಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಈ ಪ್ರಕರಣ ನಂದಗಡ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.