ಘಟಪ್ರಭಾ:ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಘಟಪ್ರಭಾ ಡಿ 12 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕರಿಗಾರ ಸರ್ ಮನೆಯಿಂದ (ಬಸವ ನಗರ ಟಿಚರ್ಸ ಕಾಲನಿ) ಹುಕ್ಕೇರಿ ಮುಖ್ಯ ರಸ್ತೆಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ ಬೆನವಾಡೆ ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಹಿರಿಯರಾದ ಡಿ.ಎಂ.ದಳವಾಯಿ, ಗ್ರಾ.ಪಂ ಸದಸ್ಯರಾದ ನಾಗರಾಜ ನಾಯಿಕ. ಹಸೀನಾ ಜತ್ತಿ, ವಿನಯ ಜಾಧವ, ಕಲ್ಲಪ್ಪ ಸನದಿ, ರಾಜಶೇಖರ ರಜಪೂತ, ಸಾಮಿತ್ರಿ ಕುಂದರಗಿ, ಮಾಬುಖಾನ ಕಡಲಗಿ, ಪರಶುರಾಮ ಗಾಡಿವ್ವಡರ, ಪ.ಪಂ ಸದಸ್ಯ ಸಲೀಮ ಕಬ್ಬೂರ, ಸುರೇಶ ಪೂಜೇರಿ, ಇಂಜನಯರ ಯುವರಾಜ ಚೌವ್ಹಾನ, ನೂರಹ್ಮದ ಮೋಮಿನ, ನಿಂಗಪ್ಪ ಮಾಳೆಪ್ಪಗೋಳ, ಷಣ್ಮುಖ ಬಿದರಿ, ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.