RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ದತ್ತ ಪೀಠ ಚಲೋ ಅಭಿಯಾನ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ತೆರಳಿದ ಶ್ರೀ ರಾಮ ಸೇನೆಯ ಕಾರ್ಯಕರ್ತರು

ಗೋಕಾಕ:ದತ್ತ ಪೀಠ ಚಲೋ ಅಭಿಯಾನ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ತೆರಳಿದ ಶ್ರೀ ರಾಮ ಸೇನೆಯ ಕಾರ್ಯಕರ್ತರು 

ದತ್ತ ಪೀಠ ಚಲೋ ಅಭಿಯಾನ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ತೆರಳಿದ ಶ್ರೀ ರಾಮ ಸೇನೆಯ ಕಾರ್ಯಕರ್ತರು

ಗೋಕಾಕ ನ 18 : ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅವರ ಕರೆಯ ಮೇರೆಗೆ ದತ್ತ ಪೀಠ ಚಲೋ ಅಭಿಯಾನದಲ್ಲಿ ಶ್ರೀ ರಾಮ ಸೇನೆಯ ಮುಖಂಡರಾದ ರಾಜು ಜಾಧವ, ಸುನೀಲ ಮುರ್ಕಿಭಾಂವಿ ನೇತ್ರತ್ವದಲ್ಲಿ ನೂರಾರು ಜನ ದತ್ತ ಮಾಲಾಧಾರಿಗಳು ಶನಿವಾರದಂದು ಬೆಳಿಗ್ಗೆ ನಗರದ ಪಟಗುಂದಿ ಹನುಮಂತ ದೇವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ದತ್ತಪೀಠಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ಕೇದಾರಿ ಜಾಧವ, ಬಸವರಾಜ ಪಡತಾರೆ, ಗಂಗಪ್ಪ ಶಿಂಧೆ, ರವಿ ಪೂಜೇರಿ, ಸುನೀಲ ಗೋರ್ಫಡೆ, ಹನಮಂತ ನಿಲಗಟ್ಟಿ, ನಾಗು ದೇಸಾಯಿ, ಮಂಜು ತೇಲಿ, ಪ್ರವೀಣ ಪಾಶ್ಚಾಪೂರ, ವಿಜಯ ಹಿರೇಮಠ, ಜಗದೀಶ ಚೌಧರಿ, ಎಸ್ ವಿ ದೇಮಶೆಟ್ಟಿ, ಆನಂದ ಗೋಟಡಕಿ, ಸಿದ್ದು ಗೋರ್ಫಡೆ, ಶಿವು ಪೂಜೇರಿ ಸೇರಿದಂತೆ ನೂರಾರು ಜನ ಕಾರ್ಯಕರ್ತರು ದತ್ತ ಮಾಲಾಧಾರಿಗಳು ಇದ್ದರು.

Related posts: