RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಸರ್ವಾಧ್ಯಕ್ಷ ಆಯ್ಕೆ : ನಿವೃತ್ತ ಪ್ರಾಧ್ಯಾಪಕ ಪ್ರೋ ಚಂದ್ರಶೇಖರ್ ಅಕ್ಕಿ ಅವರಿಗೆ ಕರವೇ ಸನ್ಮಾನ

ಗೋಕಾಕ:ಸರ್ವಾಧ್ಯಕ್ಷ ಆಯ್ಕೆ : ನಿವೃತ್ತ ಪ್ರಾಧ್ಯಾಪಕ ಪ್ರೋ ಚಂದ್ರಶೇಖರ್ ಅಕ್ಕಿ ಅವರಿಗೆ ಕರವೇ ಸನ್ಮಾನ 

ಸರ್ವಾಧ್ಯಕ್ಷ ಆಯ್ಕೆ : ನಿವೃತ್ತ ಪ್ರಾಧ್ಯಾಪಕ ಪ್ರೋ ಚಂದ್ರಶೇಖರ್ ಅಕ್ಕಿ ಅವರಿಗೆ ಕರವೇ ಸನ್ಮಾನ

ಗೋಕಾಕ ನ 11 : ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಯಾದ ಇಲ್ಲಿನ ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕ ಪ್ರೋ ಚಂದ್ರಶೇಖರ್ ಅಕ್ಕಿ ಅವರನ್ನು ಮನೆಗೆ ಭೇಟಿ ನೀಡಿದ ಕರವೇ ಕಾರ್ಯಕರ್ತರು ಅವರನ್ನು ಸತ್ಕರಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೋ ಅಕ್ಕಿ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುವುದು ಸಂತೋಷ ತಂದಿದ್ದು, ಸಾಹಿತ್ಯಾಸಕ್ತರು, ಅಭಿಮಾನಿಗಳು ನನ್ನ ಮೇಲೆ ಇಟ್ಟ ಅಭಿಮಾನವನ್ನು ಎಂದು ಮಲೆಯಲಾರದು. ಅವರ ಆಸೆಯಂತೆ ಸಾಹಿತ್ಯಕ ಕಾರ್ಯಗಳನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ರಾಜು ಕೆಂಚನಗುಡ್ಡ, ಮಂಜುನಾಥ್ ಪ್ರಭುನಟ್ಟಿ, ಗುರು ಮುನ್ನೋಳಿಮಠ, ಸಾಕೀಬ ಕೋತವಾಲ, ಸಿದ್ದು ಖಾನಪ್ಪನವರ ಉಪಸ್ಥಿತರಿದ್ದರು

Related posts: