ಗೋಕಾಕ:ರಕ್ಷಾ ಬಂಧನ: ಚಿಣ್ಣರೊಂದಿಗೆ ಎಂ.ಎಲ್.ಸಿ ಲಖನ್ ಸಂಭ್ರಮ;

ರಕ್ಷಾ ಬಂಧನ: ಚಿಣ್ಣರೊಂದಿಗೆ ಎಂ.ಎಲ್.ಸಿ ಲಖನ್ ಸಂಭ್ರಮ;
ಗೋಕಾಕ ಅ 19 : ಸಹೋದರ-ಸಹೋದರಿಯರ ಪ್ರೀತಿಯ ಪ್ರತೀಕ ರಕ್ಷಾ ಬಂಧನವನ್ನು ಸೋಮವಾರದಂದು ತಾಲೂಕಿನಾದ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಇಲ್ಲಿನ ಗೋಕಾಕ ಶಿಕ್ಷಣ ಸಂಸ್ಥೆಯ ಶಂರಕಲಿಂಗ ಶಾಲೆಯ ಎಲ್.ಕೆ.ಜಿ., ಯು.ಕೆ.ಜಿ ಪುಟ್ಟಮಕ್ಕಳೊಂದಿಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ರಕ್ಷಾ ಬಂಧನದ ಸಂಭ್ರಮವನ್ನು ಹಂಚಿಕೊಂಡರು. ಪುಟ್ಟ ಮಕ್ಕಳು ಶಾಸಕ ಲಖನ್ ಜಾರಕಿಹೊಳಿ ಅವರಿಗೆ ರಾಖಿ ಕಟ್ಟಿ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಶಿಕ್ಷಕರುಗಳಾದ ರಾಮಚಂದ್ರ ಕಾಕಡೆ, ಶ್ರೀಮತಿ ಎಚ್.ವ್ಹಿ ಹಟ್ಟಿ, ಶ್ರೀಮತಿ ಜೆ.ಸಿ ಬಡಗಣ್ಣವರ,ಶ್ರೀಮತಿ ಎಸ್.ಎಸ್.ಮಿಲಾಣಿ, ಶ್ರೀಮತಿ ಜಿ.ಕೆ.ಪಾಟೀಲ, ಮುಖಂಡ ಆರೀಪ ಪೀರಜಾದೆ ಉಪಸ್ಥಿತರಿದ್ದರು