RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಸ್ವತಂತ್ರ ಇಲ್ಲದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆ : ಅಗಸ್ಟ್ 15 ರಂದು ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧಾರ : ಗಿರೀಶ್ ಝಂವರ

ಗೋಕಾಕ:ಸ್ವತಂತ್ರ ಇಲ್ಲದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆ : ಅಗಸ್ಟ್ 15 ರಂದು ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧಾರ : ಗಿರೀಶ್ ಝಂವರ 

ಸ್ವತಂತ್ರ ಇಲ್ಲದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆ : ಅಗಸ್ಟ್ 15 ರಂದು ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧಾರ : ಗಿರೀಶ್ ಝಂವರ

ಗೋಕಾಕ ಅ 13 : ಸ್ವತಂತ್ರ ಇಲ್ಲದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮುಂಬರುವ ಅಗಸ್ಟ್ 15 ರಂದು ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಖಾಸಗಿ ಆಡಳಿತ ಮಂಡಳಿ , ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಸಮನ್ವಯ ಸಮಿತಿಯ ಗೋಕಾಕ ತಾಲೂಕು ಉಪಾಧ್ಯಕ್ಷ ಗಿರೀಶ್ ಝಂವರ ಹೇಳಿದರು.

ಮಂಗಳವಾರದಂದು ನಗರದ ನವಜೀವನ್ ಶಾಲಾ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ದಿನಕ್ಕೊಂದು ಆದೇಶ ಹೊರಡಿಸಿ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಯಾವ ನಿಯಮಗಳನ್ನು ಪಾಲಿಸದೆ ನ್ಯಾಯಾಲಯದ ತೀರ್ಪುಗಳನ್ನು ಕಡೆಗಣಿಸಿ ಹೊಸ ಶಿಕ್ಷಣ ಸಂಸ್ಥೆ ರಚಿಸಿದ ನಿಯಮಗಳನ್ನು ಯಾತ್ತಾವತ್ತಾಗಿ ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಹೇರುವ ಮುಖಾಂತರ ಶಿಕ್ಷಣ ಇಲಾಖೆ ಅಲ್ಲದೆ ಇತರ ಇಲಾಖೆಗಳಾದ ಅಗ್ನಿ ಸುರಕ್ಷತಾ ಇಲಾಖೆ, ಲೋಕೋಪಯೋಗಿ ಇಲಾಖೆ , ರೆವಿನ್ಯೂ ಇಲಾಖೆ, ಮಕ್ಕಳ ಹಕ್ಕು ಆಯೋಗ, ಪೊಲೀಸ್ ಇಲಾಖೆ ಈ ರೀತಿ ಹಲವು ಇಲಾಖೆಗಳು ಪ್ರಸ್ತುತ ಸಾಧ್ಯವಾಗದಂತಹ ದಾಖಲೆಗಳನ್ನು ಕೊಡಬೇಕೆಂಬ ಕಿರುಕುಳ, ದೌರ್ಜನ್ಯ ಹಾಗೂ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದು ಬಂದಿದೆ..ಸರಕಾರ , ಶಿಕ್ಷಣ ಇಲಾಖೆ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ದೂರುಕೊಟ್ಟರು ಪ್ರಯೋಜನ ಆಗದೆ ಅನಿರ್ವಾಯವಾಗಿ ನ್ಯಾಯಾಲಯದ ಮೋರೆ ಹೋಗಬೇಕಾಯಿತು.
ಕರ್ನಾಟಕ ಉಚ್ಚನ್ಯಾಯಾಲಯ 5 ಪ್ರಮುಖ ಪ್ರತ್ಯೇಕ ವಿಷಯಗಳಲ್ಲಿ ಸರಕಾರದ ಸುತ್ತೋಲೆಗಳನ್ನು ರದ್ದುಗೊಳಿಸಿ ಚಿಮಾರಿ ಹಾಕಿ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಗಳು ತಮ್ಮ ಶಾಲೆಗಳಿಗೆ ಯಾಕೆ ಇಲ್ಲಾ, ಆದೇಶಗಳು ಇದ್ದಲ್ಲಿ ನ್ಯಾಯಾಲಯದ ಮುಂದೆ ಪ್ರಸ್ತುತ ಪಡೆಸಿ ಎಂದು ಆದೇಶಿಸಿದರು. ಯಾವುದೇ ಉದಾಹರಣೆ ನೀಡದೆ 20 ತಿಂಗಳ ನಂತರ ರದ್ದು ಮಾಡಿರುವಂತಹ ಆದೇಶದ ಮೇಲೆ ಶಿಕ್ಷಣ ಇಲಾಖೆ ಮೇಲ್ಮನವಿ ಹೋಗುವ ಮುಖಾಂತರ ಮತ್ತೊಮ್ಮೆ ಕಳೆದ 3 ವರ್ಷಗಳಿಂದ ಒಂದೊಂದು ವರ್ಷಕ್ಕೆ ಮಾತ್ರ ಮಾನ್ಯತೆ ನವೀಕರಣ ಹಳೆ ಶಿಕ್ಷಣ ಸಂಸ್ಥೆಗಳಿಗೆ, ಸ್ವಾಭಾವಿಕ ಬೆಳವಣಿಗೆಯ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಮುಖಾಂತರ ಪ್ರತಿ ವರ್ಷ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಂಡು ಬರುತ್ತಿದ್ದು, ಪ್ರಸ್ತುತ ವರ್ಷದಲ್ಲಿ ಶಿಕ್ಷಣ ಇಲಾಖೆ ಮೇಲಾಧಿಕಾರಿಗಳು, ಶಿಕ್ಷಣ ಮಂತ್ರಿಗಳು ಡಿ.ಡಿ.ಪಿ.ಐ ಹಾಗೂ ಬಿ.ಇ.ಒ ವರ್ಗಾವಣೆ ನಡೆಸಿ ವರ್ಗಾವಣೆಯಲ್ಲಿ 25 ರಿಂದ 30 ಲಕ್ಷ ರೂಗಳ ವಸೂಲಿ ನಡೆದಿದೆ ಎಂದು ಶಿಕ್ಷಣ ಇಲಾಖೆಯಲ್ಲಿ ಆರೋಪ ಕೇಳಿ ಬರುತ್ತಿದೆ. ಈ ಪ್ರಯುಕ್ತವೆ ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಡಿ.ಡಿ.ಪಿ.ಐ ಗಳಿಗೆ ತಾವು ಖರ್ಚು ಮಾಡಿರುವುದನ್ನು ವಸೂಲಿ ಮಾಡಲು ದಾರಿಯಾಗಿ ಮತ್ತೆ ಖಾಸಗಿ ಅನುಧಾನ ರಹಿತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣದ ತಂತ್ರಾಂಶದಲ್ಲಿ ನ್ಯಾಯಾಲಯ ವಜಾಗೊಳಿಸಿರುವ ಎಲ್ಲಾ ಆದೇಶಗಳನ್ನು ಯತ್ತಾವತ್ತಾಗಿ ಕಾದಿರಿಸಿಕೊಂಡು ಯಾವುದೇ ಪರಿಹಾರ ಇಲ್ಲದ ರೀತಿಯಲ್ಲಿ ತಂತ್ರಾಂಶ ಬದಲಾವಣೆ ಇಲ್ಲದೆ ಬಿಡುಗಡೆ ಮಾಡಲಾಗಿದೆ.
ಈ ಪರಿಸ್ಥಿತಿಯನ್ನು ಖಂಡಿಸಿ ಸ್ವತಂತ್ರ ಇಲ್ಲದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮುಂಬರುವ ಆಗಸ್ಟ್ 15 ರಂದು ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ಆ ದಿನದಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಕಪ್ಪುಪಟ್ಟಿ ತೊಡುವ ಮುಖೇನ ಕರಾಳ ದಿನಾಚರಣೆಯನ್ನು ಆಚರಿಸುವ ಮೂಲಕ ಇಲಾಖೆಗಳಿಂದ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸಂದೀಪ್ ಅನಿಗೊಳ,ಕಾರ್ಯದರ್ಶಿ ಮ್ಯಾಥ್ಯೂ ವರ್ಗಿಸ್, ಸದಸ್ಯರುಗಳಾದ ಶ್ರೀಮತಿ ಅಲಕಾ ಐಹೋಳೆ, ಶ್ರೀಮತಿ ಸುಚಿತ್ರಾ ಹತಪಾಕಿ, ಇಸ್ಮಾಯಿಲ್ ಮೊಕಾಶಿ ಉಪಸ್ಥಿತರಿದ್ದರು.

Related posts: