ಗೋಕಾಕ:ಪುಸ್ತಕಗಳನ್ನು ಒದುವ ಹವ್ಯಾಸ ಬೆಳೆಸಿಕೊಂಡು ಸಾಹಿತಿಗಳನ್ನು ಪ್ರೋತ್ಸಾಹಿಸಿ : ಪ್ರೋ ಅಕ್ಕಿ ಅಭಿಮತ

ಪುಸ್ತಕಗಳನ್ನು ಒದುವ ಹವ್ಯಾಸ ಬೆಳೆಸಿಕೊಂಡು ಸಾಹಿತಿಗಳನ್ನು ಪ್ರೋತ್ಸಾಹಿಸಿ : ಪ್ರೋ ಅಕ್ಕಿ ಅಭಿಮತ
ಗೋಕಾಕ ಮೇ 26 : ಇಂದಿನ ತಾಂತ್ರಿಕ ಯುಗದಲ್ಲಿ ಜನತೆ ಪುಸ್ತಕಗಳನ್ನು ಒದುವ ಹವ್ಯಾಸ ಬೆಳೆಸಿಕೊಂಡು ಸಾಹಿತಿಗಳನ್ನು ಪ್ರೋತ್ಸಾಹಿಸುವಂತೆ ಸಾಹಿತಿ ಪ್ರೋ.ಚಂದ್ರಶೇಖರ ಅಕ್ಕಿ ಹೇಳಿದರು.
ಅವರು, ರವಿವಾರದಂದು ನಗರದ ಸಮುದಾಯ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ ತಾಲೂಕು ಘಟಕದ ಬೆಳ್ಳಿ ಮಹೋತ್ಸವದ ಸಂಭ್ರಮದ ನಿಮಿತ್ಯ ಗೋಕಾವಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಹಿರಿಯ ಕಾದಂಬರಿಕಾರ ಎಸ್ ಆರ್ ನೆಲವಡೆ ಅವರ ಮೂರನೇ ಕೃತಿ “ಬೆಟ್ಟದ ಬೇಟೆ” ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಹಿತಿಗಳನ್ನು ಪ್ರೋತ್ಸಾಹಿಸಿದರೆ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳ್ಳುತ್ತದೆ. ಹಲವಾರು ಮಹಾನ ಸಾಹಿತಿಗಳನ್ನು ನಾಡಿಗೆ ನೀಡಿದ ಗೋಕಾಕ ಸಾಹಿತ್ಯ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ತನ್ನದೇಯಾದ ಸ್ಥಾನ ಪಡೆದಿದೆ. ಸಾಹಿತ್ಯಾಸಕ್ತರು ತಾವು ತಮ್ಮ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅರಿವಿನೊಂದಿಗೆ ಈ ಕ್ಷೇತ್ರವನ್ನು ಇನ್ನು ಹೆಚ್ಚು ಬೆಳೆಸುವಂತೆ ಕರೆ ನೀಡಿದರು.
ಕೃತಿ ಬಿಡುಗಡೆಗೊಳಿಸಿದ ಸಾಹಿತಿ ಡಾ. ಸಿ ಕೆ ನಾವಲಗಿ ಮಾತನಾಡುತ್ತ, ಕನ್ನಡ ಸಾಹಿತ್ಯವನ್ನು ಗೌರವದಿಂದ ಎಲ್ಲರೂ ಕಾಣಬೇಕು. ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಲೇಖಕ ಎಸ್ ಆರ್ ನೆಲವಡೆ ಅವರ ಪುಸ್ತಕ ಪರಿಚಯವನ್ನು ಪ್ರಾ.ಜಯಾನಂದ ಮಾದರ ಮಾಡಿದರು.
ಅಧ್ಯಕ್ಷತೆಯನ್ನು ಸಾಹಿತಿ ಅಶೋಕ ಬಾಬು ನೀಲಗಾರ ವಹಿಸಿದ್ದರು.
ವೇದಿಕೆಯ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ಸಾಹಿತಿಗಳಾದ ಡಾ.ಲಕ್ಷ್ಮಣ ಚೌರಿ, ಶ್ರೀಮತಿ ಶಕುಂತಲಾ ದಂಡಗಿ, ಪ್ರಕಾಶ ಕೋಟಿನತೋಟ, ಲೇಖಕ ಎಸ್ ಆರ್ ನೆಲವಡೆ ಉಪಸ್ಥಿತರಿದ್ದರು.
ವಿದ್ಯಾ ರೆಡ್ಡಿ ಸ್ವಾಗತಿಸಿದರು. ಆನಂದ ಸೊರಗಾಂವಿ ನಿರೂಪಿಸಿದರು. ಈಶ್ವರ ಚಂದ್ರ ಬೆಟಗೇರಿ ವಂದಿಸಿದರು.