ಗೋಕಾಕ:ಗೋವಾ ಸಾಂಗೋಲ್ಡಾದಲಿ ತೆರವುಗೊಳಿಸಿದ ಮನೆಗಳಿಗೆ ಕರವೇ ಭೇಟಿ : ನಿರಾಶ್ರಿತರಿಗೆ ಸ್ವಾಂತಾನ

ಗೋವಾ ಸಾಂಗೋಲ್ಡಾದಲಿ ತೆರವುಗೊಳಿಸಿದ ಮನೆಗಳಿಗೆ ಕರವೇ ಭೇಟಿ : ನಿರಾಶ್ರಿತರಿಗೆ ಸ್ವಾಂತಾನ
ಗೋಕಾಕ ಎ 17 : ಗೋವಾ ರಾಜ್ಯದ ಸಾಂಗೋಲ್ಡಾದಲಿ ಸರಕಾರ ತೆರವುಗೊಳಿಸಿರುವ ನಿರಾಶ್ರಿತ ಗೋವಾ ಕನ್ನಡಿಗರ ಮನೆಗಳಲ್ಲಿಗೆ ಬುಧವಾರದಂದು ಕರವೇ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಭೇಟಿ ನೀಡಿ ಗೋವಾ ಕನ್ನಡಿಗರಿಗೆ ಸ್ವಾಂತಾನ ಹೇಳಿದರು
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಯಾವುದೇ ಮುನ್ಸೂಚನೆ ನೀಡದೆ ಗೋವಾದ ಸಾಂಗೋಲ್ಡಾದಲಿ ಕಳೆದ 40 ವರ್ಷಗಳಿಂದ ವಾಸವಿರುವ ಕನ್ನಡಿಗರ 23 ಮನೆಗಳನ್ನು ತೆರವುಗೊಳಿಸಿರುವ ಸರಕಾರದ ಕ್ರಮ ಅತ್ಯಂತ ಖಂಡನೀಯವಾಗಿದ್ದು, ತಕ್ಷಣ ಗೋವಾ ಸರಕಾರ ನಿರಾಶ್ರಿತ ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೋಡಬೇಕು .ಈಗಾಗಲೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಸರಕಾರ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಪತ್ರ ಬರೆದು ಪುನರ್ವಸತಿ ಕಲ್ಪಿಸುವಂತೆ ವಿನಂತಿಸಿದ್ದಾರೆ.ಶೀಘ್ರದಲ್ಲೇ ನಿರಾಶ್ರಿತ ಗೋವಾ ಕನ್ನಡಿಗರಿಗೆ ನ್ಯಾಯ ಸಿಗುವ ಭರವಸೆ ಇದ್ದು, ಗೋವಾ ರಾಜ್ಯದ ಕನ್ನಡಿಗರು ಸಹ ಇದಕ್ಕೆ ಪೂರಕವಾಗಿ ಸ್ವಂದಿಸಿ ನಿರಾಶ್ರಿತರ ಬೆನ್ನಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಂಗೋಲ್ಡಾದ ಗ್ರಾಮದ ನಿರಾಶ್ರಿತರಾದ , ಮಹೇಶ್ ಬಡಿಗೇರ, ಚಂದ್ರಕಾಂತ ಕಾಂಬ್ಳೆ, ಅಶೋಕ್ ರಾಠೋಡ, ರಫೀಕ್ ತಳವಾರ, ಯುವರಾಜ ನಾಯಕ ಮುಖಂಡ ಮಹಾದೇವ ವಗ್ಗನವರ, ಸಾದಿಕ ಹಲ್ಯಾಳ, ಮುಗುಟ ಪೈಲವಾನ, ನಿಜಾಮ ನಧಾಫ ಉಪಸ್ಥಿತರಿದ್ದರು.