RNI NO. KARKAN/2006/27779|Friday, May 9, 2025
You are here: Home » breaking news » ಘಟಪ್ರಭಾ:ದಿ 19 ರಂದು ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಚಿಂತನ ಗೋಷ್ಠಿ,

ಘಟಪ್ರಭಾ:ದಿ 19 ರಂದು ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಚಿಂತನ ಗೋಷ್ಠಿ, 

ದಿ 19 ರಂದು ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಚಿಂತನ ಗೋಷ್ಠಿ,

ಘಟಪ್ರಭಾ ಅ 17: ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಪ್ರತಿ ಅಮವಾಸ್ಯೆಗೊಮ್ಮೆ ಜರಗುವ ಮಾಸಿಕ ಚಿಂತನ ಗೋಷ್ಠಿಯ 86ನೇ ಮಾಸಿಕ ಸುವಿಚಾರ ಚಿಂತನ ಗೋಷ್ಠಿ, ಶ್ರೀಗಳ ಕಿರೀಟ ಪೂಜಾ ಸಮಾರಂಭವು ದಿ.19 ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ.

 

ಸಮಾರಂಭದ ದಿವ್ಯ ಸಾನಿಧ್ಯವನ್ನು ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು ವಹಿಸುವರು. ಅಧ್ಯಕ್ಷತೆಯನ್ನು ಗುಗದಡ್ಡಿ ಗ್ರಾಮದ ಶ್ರೀ ಸಿದ್ಧಾರೂಢಮಠದ ಸಿದ್ಧರಾಮ ಮಹಾಸ್ವಾಮಿಜಿ ವಹಿಸುವರು. ಮಲೀಕಸಾಬ ಜಮಾದಾರ ಇವರಿಂದ ಗುರುಸೇವೆ ಕುರಿತು ಅನುಭಾವ ಜರುಗಲಿದೆ

 

 

ಜಾತ್ರಾ ಪತ್ರಿಕೆಯನ್ನು ರಾಯಬಾಗದ ಮಾಜಿ ಶಾಸಕ ಬಿ.ಸಿ.ಸರಿಕರ ಬಿಡುಗಡೆ ಮಾಡುವರು.
ಮಲ್ಲಿಕಾರ್ಜುನ ನಾವಿ ಇವರಿಂದ ಅನ್ನದಾಸೋಹ, ಲಕ್ಷ್ಮಣ ಬಡಿಗೇರ ಇವರಿಂದ ಚಿಂತನದಾಸೋಹ, ಹಣಮಂತ ದಾಸರ, ಹಣಮಂತ ಪಾದಗಟ್ಟಿ, ಗಂಗಾಧರ ಕುಂಬಾರ ಹೊಳಿಹೊಸೂರ ಇವರಿಂದ ಸಂಗೀತ ಸೇವೆ ಜರುಗಲಿದೆ.

Related posts: