RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಗೋಕಾಕ:ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ 

ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಗೋಕಾಕ ಅ 30 : ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ಹಣ ವಸೂಲಿ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಇಲ್ಲಿನ ಕರವೇ ಕಾರ್ಯಕರ್ತರು ಸೋಮವಾರದಂದು ಪತ್ರಿಭಟನೆ ನಡೆಯಿಸಿ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಮುಖಾಂತರ ಆರೋಗ್ಯ ಸಚಿವರಿಗೆ ಮನವಿ ಅರ್ಪಿಸಿದರು.
ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ನಗರದ ಸರಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ.
ಆಸ್ಪತ್ರೆ ಕಟ್ಟಡ ಸಾಕಷ್ಟು ವಿಶಾಲವಾಗಿದೆ. ಆದರೆ, ಇದಕ್ಕೆ ತಕ್ಕಂತೆ ಆರೋಗ್ಯ ಸೇವೆ ಇಲ್ಲಿ ದೊರಕುತ್ತಿಲ್ಲ. ಅಗತ್ಯವಿದ್ದಷ್ಟು ಸಿಬ್ಬಂದಿಗಳೂ ಇದ್ದರು ಸಹ ಸಾರ್ವಜನಿಕರು ಚಿಕಿತ್ಸೆಗಾಗಿ ನಿತ್ಯ ಅಲೆದಾಡಬೇಕಾದ ಸ್ಥಿತಿ ಇದೆ. ಆಸ್ಪತ್ರೆಯ ಅವ್ಯವಸ್ಥೆ ಕುರಿತು ಹಲವು ಸಂಘಟನೆಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದಾರೆ ಆದರೂ, ವ್ಯವಸ್ಥೆ ಮಾತ್ರ ಹಾಗೇ ಇದೆ.
ಹೆಸರಿಗೆ ಮಾತ್ರ ನೂತನ ಕಟ್ಟಡ: ಇಲ್ಲಿ ಮಕ್ಕಳಿಗಾಗಿ ಮೂರು ಜನ ವೈದ್ಯರು ಇದ್ದಾರೆ ಆದರು ಸಹ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲಾ ಎಂಬ ಆರೋಪಗಳು ಕೇಳಿ ಬರುತ್ತಿಲ್ಲ. ನೂತನ ಕಟ್ಟಡದಲ್ಲಿ ಎಲ್ಲ ಸೌಲಭ್ಯಗಳು ಇವೆ. ಆದರೆ ಅದರ ಪೂರ್ಣ ಪರಿಣಾಮದ ಸದ್ಬಳಕೆಯಾಗುತ್ತಿಲ್ಲ ಹೊಸ ಕಟ್ಟಡ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾದರು ಅದನ್ನು ಸರಿಯಾಗಿ ಬಳಸಿಕೊಳ್ಳುವ ಗೋಜಿಗೆ ಇಲ್ಲಿನ ಅಧಿಕಾರಿಗಳು ಹೋಗುತ್ತಿಲ್ಲವಾದುದರಿಂದ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ. ಇದ್ದಲದೆ ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವವರು ವೈದ್ಯರಿಗೆ ಹಣ ನೀಡಲೆಬೇಕು. ಸಿಜರಿನ್ ಆದರಂತೂ ಕತ್ಯರ್ವ ನಿರತ ವೈದ್ಯರಿಗೆ 3 ಸಾವಿರ, ಗುಲ್ ನೀಡುವ ವೈದ್ಯರಿಗೆ 15 ನೂರ ರೂಪಾಯಿಗಳನ್ನು ಕಡ್ಡಾಯವಾಗಿ ನೀಡಲೆಬೇಕು ಇಲ್ಲದಿದ್ದರೆ ಈ ವೈದ್ಯರು ಹೆರಿಗೆ ಮಾಡಿಕೊಳ್ಳುವುದೆ ಇಲ್ಲ ಅಷ್ಟೊಂದು ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿದ್ದಾರೆ ಇಲ್ಲಿನ ವೈದ್ಯರು. ಆಸ್ಪತ್ರೆಯ ತ್ಯಾಜ್ಯವನ್ನು ಶವಾಗಾರದ ಪಕ್ಕದ ರಕ್ಷಣಾ ಗೋಡೆ ಬಳಿ ಎಸೆಯುತ್ತಾರೆ. ಶವಾಗಾರದ ಪಕ್ಕದಲ್ಲಿ ಜನವಸತಿ ಪ್ರದೇಶದವಿದ್ದು, ಶವಾಗಾರದ ಪಕ್ಕದಲ್ಲಿ ಹಾಕುವ ತ್ಯಾಜ್ಯದಿಂದ ಜನರು ತೊಂದರೆ ಅನುಭವಿಸಿ ರೋಗ ರೂಜಿನಗಳಿಗೆ ತುತ್ತಾಗುತ್ತಿದ್ದಾರೆ. ಶವಾಗಾರದ ಪಕ್ಕದ ಗೋಡೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಬೇಕೆಂದು ಅಲ್ಲಿನ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಒಳ ಭಾಗದಲ್ಲಿಯೂ ಕೂಡ ಸ್ವಚ್ಛತೆ ಇಲ್ಲದ ಕಾರಣ ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಸ್ಥಿತಿ ಇಲ್ಲಿಯದ್ದು.ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕ ಇದೆ. ಆದರೆ, ಇದು ಖಾಸಗಿ ಆಸ್ಪತ್ರೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಸಾರ್ವಜನಿಕರದಾಗಿವೆ.ಲ್ಯಾಬ್, ಸ್ಕ್ಯಾನಿಂಗ್ ಸೆಂಟರ್, ಪರೀಕ್ಷಾ ಕೇಂದ್ರಗಳಿಂದ ಹಣ ವಸೂಲಿ ಮಾಡುತ್ತಾರೆ.
ಬೆಳಗಾವಿ ಜಿಲ್ಲೆಯಯಲ್ಲಿಯೇ ಅತ್ಯಂತ ಸುಸಜ್ಜಿತವಾದ ಡಯಾಲಿಸಿಸ್ ಘಟಕ ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಇದ್ದರು ಸಹ ಅದು ತರ್ತು ರೋಗಿಗಳ ಪಾಲಿಗೆ ಇದ್ದು ಇಲ್ಲದಂತಾಗಿದೆ. ಇಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವವರು ವಸಿಲಿ ಮೇಲೆ ಬರಬೇಕು. ಹಾಗೆಯೇ ಬಂದ ರೋಗಿಗಳಿಗೆ ಇಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುವುದಿಲ್ಲ. ತರ್ತು ರೋಗಿಗಳು ಬಂದರು ಇಲ್ಲಿ ಡಯಾಲಿಸಿಸ್ ಮಾಡಲು ಸಿಬ್ಬಂದಿಗಳು ಹಿಂದೆಟ್ಟು ಹಾಕುತ್ತಾರೆ. ಹಣ ನೀಡಿದರೆ ಮಾತ್ರ ಡಯಾಲಿಸಿಸ್ ಮಾಡುತ್ತಾರೆ ಎಂದು ಇಲ್ಲಿ ಡಯಾಲಿಸಿಸ ಮಾಡಿಕೊಂಡವರು ಆರೋಪ ಮಾಡುತ್ತಿದ್ದಾರೆ.
ಆದ್ದರಿಂದ ದಯಾಳುಗಳಾದ ತಾವುಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿನ ವೈದ್ಯರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಸ್ತ ಸಾರ್ವಜನಿಕರ ಪರವಾಗಿ ಕರವೇ ಮನವಿಯಲ್ಲಿ ವಿನಂತಿಸಿದೆ.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ಮುಗುಟ ಪೈಲವಾನ, ಬಸವರಾಜ ಗಾಡಿವಡ್ಡರ, ರಾಮ ಕುಡ್ಡೆಮ್ಮಿ, ಮಲ್ಲು ಸಂಪಗಾರ, ರಮೇಶ ಕಮತಿ, ಮಹಾದೇವ ಮಕ್ಕಳಗೇರಿ, ಪಪ್ಪು ಹಂದಿಗುಂದ,ನಿಜಾ ಮ ನಧಾಪ , ಕಿರಣ ತೋಗರಿ, ದುಂಡಪ್ಪ ಪಾಟೀಲ, ಮಹಾದೇವ ಹುಚ್ಚನ್ನವರ, ಲಕ್ಷ್ಮಣ ಹೂಲಿಕಟ್ಟಿ, ಹನುಮಂತ ಗಜಬೀರ, ಗಣಪತಿ ಜಾಗನೂರ, ಕಿರಣ ಕಮತಿ, ರಾಜೀವ ಬಂಡಿವಡ್ಡರ, ಶಂಕರ ಬಂಡಿವಡ್ಡರ,ಹನುಮಂತ ಕಮತಿ, ಮಾಯಪ್ಪ ತಹಶೀಲ್ದಾರ, ಶ್ರೀಶೈಲ ಕುಂಬಾರ, ಬಾಹುಬಲಿ ಖಾರೇಪಠಾಣ, ರಾಜು ಕೆಂಚನಗುಡ್ಡ, ಸದಾಶಿವ ಜೋಟೆಂನ್ನವರ, ಮಲ್ಲಪ್ಪ ತಲೆಪ್ಪಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: