RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಸದೃಢವಾದ ಆರೋಗ್ಯ ಹಾಗೂ ಮನಸ್ಸು ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗುತ್ತದೆ : ಬಿಇಓ ಬಳಗಾರ

ಗೋಕಾಕ:ಸದೃಢವಾದ ಆರೋಗ್ಯ ಹಾಗೂ ಮನಸ್ಸು ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗುತ್ತದೆ : ಬಿಇಓ ಬಳಗಾರ 

ಸದೃಢವಾದ ಆರೋಗ್ಯ ಹಾಗೂ ಮನಸ್ಸು ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗುತ್ತದೆ : ಬಿಇಓ ಬಳಗಾರ

ಗೋಕಾಕ ಸೆ 1 : ಸದೃಢವಾದ ಆರೋಗ್ಯ ಹಾಗೂ ಮನಸ್ಸು ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗುತ್ತದೆಂದು ಬಿಇಒ ಜಿ ಬಿ ಬಳಿಗಾರ ಹೇಳಿದರು.
ಅವರು, ಶುಕ್ರವಾರದಂದು ನಗರದ ಕೆಎಲ್‍ಇ ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿಕ್ಕೋಡಿ ಹಾಗೂ ಕೆಎಲ್‍ಇ ಸಂಸ್ಥೆಯ ಸಿ ಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದಿಂದ ಹಮ್ಮಿಕೊಂಡ ಗೋಕಾಕ ತಾಲೂಕು ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ನಾಯಕತ್ವ ಗುಣ ಬೆಳೆಯುದರೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುವದು. ಈ ಕ್ರೀಡಾ ಕೂಟದಲ್ಲಿ ಒಳ್ಳೆಯ ಪ್ರದರ್ಶನ ನೀಡಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸುವಂತೆ ಹಾರೈಸಿದರು.
ವೇದಿಕೆ ಮೇಲೆ ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಶಹರ ಪೋಲಿಸ ಠಾಣೆಯ ಪಿಎಸ್‍ಐ ಎಮ್ ಡಿ ಘೋರಿ, ತಾಲೂಕಾ ಕ್ರೀಡಾ ಸಂಯೋಜಕ ಎಮ್ ಬಿ ದೇವರಮನಿ, ಆಡಳಿತಾಧಿಕಾರಿಗಳಾದ ಜಿ ಎಮ್ ಅಂದಾನಿ, ಅನುಪಾ ಕೌಶಿಕ, ಪ್ರಾಚಾರ್ಯರಾದ ಕೆ ಬಿ ಮೇವುಂಡಿಮಠ, ಎಮ್ ಎ ಪಾಟೀಲ, ಅಮೃತ ಜಕ್ಕಲಿ, ಪದ್ಮಭೂಷಣ ಪಾಟೀಲ, ಪ್ರಶಾಂತ ಕಿವಟಿ, ದೈಹಿಕ ಶಿಕ್ಷಣಾಧಿಕಾರಿ ಎಲ್ ಕೆ ತೋರಣಗಟ್ಟಿ, ಹಾಗೂ ಓಂಪ್ರಕಾಶ ಅಂಗಡಿ ಇದ್ದರು.

Related posts: