RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ನ್ಯಾಯವಾದಿಗಳು ತಮ್ಮ ವೃತ್ತಿಯನ್ನು ಸಮಾಜ ಸೇವೆಯಂದು ಮಾಡಬೇಕು : ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ

ಗೋಕಾಕ:ನ್ಯಾಯವಾದಿಗಳು ತಮ್ಮ ವೃತ್ತಿಯನ್ನು ಸಮಾಜ ಸೇವೆಯಂದು ಮಾಡಬೇಕು : ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ 

ನ್ಯಾಯವಾದಿಗಳು ತಮ್ಮ ವೃತ್ತಿಯನ್ನು ಸಮಾಜ ಸೇವೆಯಂದು ಮಾಡಬೇಕು : ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ

ಗೋಕಾಕ ಅ 19 : ನ್ಯಾಯಾಂಗವಿಲ್ಲದೆ ವಕೀಲ ವೃತ್ತಿ ನಡೆಯುವದಿಲ್ಲ, ನ್ಯಾಯವಾದಿಗಳು ಕಕ್ಷಿದಾರರ ಸೇವೆ ಮಾಡಿದರೆ ನ್ಯಾಯಮೂರ್ತಿಗಳು ಪ್ರಕರಣಗಳನ್ನು ವಿಲೇವಾರಿ ಮಾಡುತ್ತಾರೆ ಇದನ್ನು ನ್ಯಾಯವಾದಿಗಳು ಸಮಾಜ ಸೇವೆಯಂದು ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ ನ್ಯಾಯಮೂರ್ತಿಗಳಾದ ರಾಮಚಂದ್ರ ಡಿ. ಹುದ್ದಾರ ಹೇಳಿದರು.
ಶನಿವಾರ ಇಲ್ಲಿನ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಗೋಕಾಕ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು
ಕೆಲ ನ್ಯಾಯವಾದಿಗಳು ಹಣಕ್ಕೆ ಆಸೆಪಟ್ಟು ನ್ಯಾಯಾಂಗದ ಹೆಸರು ಕೆಡೆಸುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ನ್ಯಾಯವಾದಿಗಳಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ನ್ಯಾಯವಾದಿಗಳು ಕಕ್ಷಿದಾರರಿಂದ ಸರಿಯಾದ ಮಾಹಿತಿ ಪಡೆದು ದಾವೆ ಹೂಡಿ ಕಕ್ಷಿದಾರರ ಪರವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಪ್ರಕರಣದಲ್ಲಿ ಕಕ್ಷಿದಾರರಿಗೆ ನ್ಯಾಯವನ್ನು ದೊರಕಿಕೊಡಲು ಸಾಧ್ಯ.
ಕಿರಿಯ ನ್ಯಾಯವಾದಿಗಳು ಹಿರಿಯ ನ್ಯಾಯವಾದಿಗಳಿಗೆ ಗೌರವ ಕೊಡುವದರ ಜೊತೆಗೆ ಸಾಕಷ್ಟು ಅಭ್ಯಾಸ ಮಾಡಿ ಸರಿಯಾದ ಮಾಹಿತಿ ಪಡೆದುಕೊಂಡು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ವಕೀಲ ವೃತ್ತಿಯನ್ನು ಸ್ಥಳೀಯವಾಗಿ ಮಾಡುವುದರ ಜೊತೆಗೆ ಹೈಕೋರ್ಟ್ ಸುಪ್ರೀಂಕೋರ್ಟ್ ನಲ್ಲಿಯೂ ಹೋಗಿ ಅಭ್ಯಾಸ ಮಾಡಿ ಒಳ್ಳೆಯ ವಕೀಲರಾಗುವ ಜೊತೆಗೆ ಒಳ್ಳೆಯ ನ್ಯಾಯಮೂರ್ತಿಗಳಾಗಬಹುದು.
ನ್ಯಾಯಾಂಗದ ಸಿಬ್ಬಂದಿಗಳು ಸಹ ಯಾವ ಆಸೆ ಆಮಿಷಗಳಿಗೆ ಒಳಗಾದೆ ನಿಯತಿನಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ‌ಸೌಲಭ್ಯಗಳನ್ನು ಪಡೆದುಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವ ಹಿಸಿ ನ್ಯಾಯಾಂಗದ ಹೆಸರನ್ನು ಉನ್ನತಮಟ್ಟಕ್ಕೇರಿಸಲು ಪ್ರಯತ್ನಿಸಿಬೇಕು ಎಂದು ಕರೆ ನೀಡಿದ ಅವರು ಎಲ್ಲರ ಸಹಕಾರದಿಂದ ಸಾಕಷ್ಟು ಹಳೆಯ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇರುವ ಹಳೆಯ ಪ್ರಕರಣಗಳನ್ನು
ಮುತುವರ್ಜಿ ವಹಿಸಿ ಇತ್ಯರ್ಥಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ ನ್ಯಾಯಮೂರ್ತಿಗಳಾದ ರಾಮಚಂದ್ರ ಡಿ. ಹುದ್ದಾರ ಮತ್ತು ಕರ್ನಟಕ ಆಡಳಿತಾತ್ಮಕ ಪ್ರಾಧಿಕಾರದ ನ್ಯಾಯಿಕ ಸದಸ್ಯ ಎಸ್.ವೈ.ವಟವಟಿ ಅವರನ್ನು ಆತ್ಮೀಯವಾಗಿ ಸತ್ಕರಿಸಿ, ಗೌರವಿಸಿದರು. ಹಿರಿಯ ವಕೀಲರಾದ 62 ವರ್ಷಗಳಿಂದ ವಕೀಲಿ ವೃತ್ತಿ ನಡೆಸುತ್ತಿರುವ ಬಿ.ಆರ್.ಕೊಪ್ಪ ಮತ್ತು 50 ವರ್ಷಗಳಿಗೂ ಅಧಿಕ ಅವಧಿಗೆ ವಕೀಲಿ ವೃತ್ತಿ ನಡೆಸಿದ ಎಂ.ಎ.ಅಂಗಡಿ ಅವರನ್ನು ಸತ್ಕರಿಸಿ, ಗೌರವಿಸಿದರು.
ವೇದಿಕೆಯಲ್ಲಿ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ದೀಪಾ ಜಿ., 1ನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಶಂಕರ ಕೆ.ಎಂ., ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಧೀಶ ರಾಜೀವ ಗೋಳಸಾರ, 1ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಸೂರ್ಯಪ್ರಭಾ ಎಚ್.ಡಿ., 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ರೂಪಾ ಮಟ್ಟಿ ಮತ್ತು ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಬಿ.ಆರ್.ಕೋಟಗಿ ಇದ್ದರು.
ಹಿರಿಯ ವಕೀಲ ವಿ.ವಿ.ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ ಸತ್ಕಾರ ಮೂರ್ತಿಗಳ ಪರಿಚಯ ನೀಡಿದರು. ನೋಟರಿ ಶಂಕರ ಗೋರೋಶಿ ಸ್ವಾಗತಿಸಿದರು. ಶೈಲಜಾ ಕೊಕ್ಕರಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎಸ್.ಎಸ್.ಜಿಡ್ಡಿಮನಿ ವಂದಿಸಿದರು.

Related posts: