RNI NO. KARKAN/2006/27779|Tuesday, July 28, 2026
You are here: Home » breaking news » ಗೋಕಾಕ:ಸಮಾಜಸೇವೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ : ವೆಂಕಟೇಶ್ ರೋಟರಿ

ಗೋಕಾಕ:ಸಮಾಜಸೇವೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ : ವೆಂಕಟೇಶ್ ರೋಟರಿ 

ಸಮಾಜಸೇವೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ : ವೆಂಕಟೇಶ್ ರೋಟರಿ

ಗೋಕಾಕ ಏ 28 :  ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ  ಸಮಾಜಸೇವೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ರೋಟರಿ ಸಂಸ್ಥೆಯ ಪ್ರಾಂತಪಾಲ ವೆಂಕಟೇಶ್ ದೇಶಪಾಂಡೆ ಹೇಳಿದರು.
ಗುರುವಾರದಂದು ನಗರದ ಕೆಎಲ್ಇ ಬಿ.ಸಿ.ಎ ಕಾಲೇಜಿನಲ್ಲಿ ನೂತನ ರೋಟ್ರಾಕ್ಟ ಘಟಕಕ್ಕೆ  ಚಾಲನೆ ನೀಡಿ ಮಾತನಾಡುತ್ತಾ ರೋಟರಿ ಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಅವುಗಳ ಸದುಪಯೋಗದಿಂದ ವಿದ್ಯಾರ್ಥಿಗಳು ಪ್ರತಿಭಾವಂತರರಾಗುವಂತೆ ಕರೆ ನೀಡಿದರು‌
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ್ ನಾಡಗೌಡ, ಪದಾಧಿಕಾರಿಗಳಾದ ಸೋಮಶೇಖರ್ ಮಗದುಮ್ಮ, ಮಲ್ಲಿಕಾರ್ಜುನ ಈಟಿ ಹಾಗೂ ಪ್ರಾಚಾರ್ಯ ಪ್ರಶಾಂತ್ ಕಿವಟಿ ಇದ್ದರು.

Related posts: