ಗೋಕಾಕ:ಅಶೋಕ ಪೂಜಾರಿ ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್: ಕಾರ್ಯಕರ್ತರ ಆಕ್ರೋಶ : ದಿ 10 ರಂದು ಹಿತೈಷಿಗಳ ಸಭೆ ಪೂಜಾರಿಯಿಂದ ವಿಡಿಯೋ ಸಂದೇಶ ಬಿಡುಗಡೆ

ಅಶೋಕ ಪೂಜಾರಿ ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್: ಕಾರ್ಯಕರ್ತರ ಆಕ್ರೋಶ : ದಿ 10 ರಂದು ಹಿತೈಷಿಗಳ ಸಭೆ ಪೂಜಾರಿಯಿಂದ ವಿಡಿಯೋ ಸಂದೇಶ ಬಿಡುಗಡೆ
ಗೋಕಾಕ ಏ 6 : ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಮುಖಂಡ ಅಶೋಕ ಪೂಜಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಗುರುವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿ ಕಾಂಗ್ರೆಸ್ ಪಕ್ಷದ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುತ್ತೇವೆ ಎಂದು ಪಕ್ಷಕ್ಕೆ ಸೇರಿಸಿಕೊಂಡ ಕೈ ನಾಯಕರು ಇಂದು ಮತಕ್ಷೇತ್ರದಲ್ಲಿ ಯಾರಿಗೂ ಪರಿಚರವಿಲ್ಲದ ಡಾ.ಮಹಾಂತೇಶ ಕಡಾಡಿ ಅವರಿಗೆ ಟಿಕೆಟ್ ನೀಡಿ ಅಶೋಕ ಪೂಜಾರಿ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ,ಟೈಯರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಇನ್ನೂ ಕಾಲ ಮಿಂಚಿಲ ಪಕ್ಷ ತಮ್ಮ ನಿಲುವನ್ನು ಪೂರ್ಣರ ಪಾರಮರ್ಶಿಸಿ ಗೆಲ್ಲುವ ಅಭ್ಯರ್ಥಿ ಅಶೋಕ ಪೂಜಾರಿ ಅವರಿಗೆ ಬಿಪಾರ್ಮ ನೀಡಬೇಕು ಎಂದು ಆಗ್ರಹಿಸಿದರು.
ದಿನಾಂಕ 10 ರಂದು ಬೆಂಬಲಿಗರ ಸಭೆ : ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಮುಖಂಡ ಅಶೋಕ ಪೂಜಾರಿ ಅವರು ದಿನಾಂಕ 10 ರಂದು ಮುಂಜಾನೆ 11 ಘಂಟೆಗೆ ನಗರದ ಜ್ಞಾನ ಮಂದಿರದಲ್ಲಿ ಕಾರ್ಯಕರ್ತರ , ಅಭಿಮಾನಿಗಳು, ಹಿತೈಷಿಗಳ ಸಭೆ ಕರೆದಿದ್ದಾರೆ. ಅಂದು ತಮ್ಮ ಅಭಿಮಾನಿಗಳೊಂದಿಗೆ ಸಭೆ ನಡೆಸಿದ ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ವಿಡಿಯೋ ಸಂದೇಶವೊಂದರಲ್ಲಿ ಅಶೋಕ್ ಪೂಜಾರಿ ವಿನಂತಿಸಿದ್ದಾರೆ.