RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಅಪಘಾತದಲ್ಲಿ ಮೃತಪಟ್ಟ 8ಜನ ಮೃತ ಕೂಲಿಕಾರ್ಮಿಕರ ಕುಟುಂಬಕ್ಕೆ ಪರಿಹಾರ ನಿಧಿ ಆದೇಶ ಪತ್ರ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ

ಗೋಕಾಕ:ಅಪಘಾತದಲ್ಲಿ ಮೃತಪಟ್ಟ 8ಜನ ಮೃತ ಕೂಲಿಕಾರ್ಮಿಕರ ಕುಟುಂಬಕ್ಕೆ ಪರಿಹಾರ ನಿಧಿ ಆದೇಶ ಪತ್ರ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ 

ಅಪಘಾತದಲ್ಲಿ ಮೃತಪಟ್ಟ 8ಜನ ಮೃತ ಕೂಲಿಕಾರ್ಮಿಕರ ಕುಟುಂಬಕ್ಕೆ ಪರಿಹಾರ ನಿಧಿ ಆದೇಶ ಪತ್ರ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :
ಅಪಘಾತದಲ್ಲಿ ಮೃತಪಟ್ಟ 8ಜನ ಮೃತ ಕೂಲಿಕಾರ್ಮಿಕರ ಕುಟುಂಬಕ್ಕೆ ಮಂಜೂರಾದ ಮುಖ್ಯಮಂತ್ರಿ ಪರಿಹಾರ ನಿಧಿ ಆದೇಶ ಪತ್ರವನ್ನು ಶಾಸಕ ರಮೇಶ ಜಾರಕಿಹೊಳಿ ಅವರು ರವಿವಾರದಂದು ತಮ್ಮ ಗೃಹ ಕಚೇರಿಯಲ್ಲಿ ವಿತರಿಸಿದರು.
ಕಳೆದ ಜೂನ್ ತಿಂಗಳು ದಿ.26ರಂದು ಕೂಲಿ ಕಾರ್ಮಿಕರು ತಮ್ಮ ದಿನನಿತ್ಯದ ಕೂಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೂಲಿಕಾರ್ಮಿಕರ ಕುಟುಂಬಸ್ಥರಾದ ಗಂಗವ್ವ ಹರಿಜನ, ಮಹಾದೇವಿ ಹಣಮಣ್ಣವರ, ಸವಿತಾ ಗಸ್ತಿ, ಸುವರ್ಣಾ ಸಜಲಿ, ಅನಿತಾ ಬೆಳವಿ, ಲಕ್ಷ್ಮೀ ಖಂಡೂರಿ, ಹೊಳೆವ್ವ ಸನದಿ, ರೇಣುಕಾ ಕಳಸನ್ನವರ ಅವರಿಗೆ ತಲಾ 5ಲಕ್ಷ ಪರಿಹಾರ ನಿಧಿ ಆದೇಶ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಕಾಂತು ಎತ್ತಿನಮನಿ, ಸುರೇಶ ಸನದಿ, ಮುನ್ನಾ ದೇಸಾಯಿ, ವೀರುಪಾಕ್ಷ ಅಂಗಡಿ ಸೇರಿದಂತೆ ಅನೇಕರು ಇದ್ದರು.

Related posts: