ಗೋಕಾಕ:ಅನಾಹುತ ಮಳೆಯಿಂದ ಗುಡ್ಡ ಕುಸಿತ: ಮಾಣಿಕವಾಡಿ ಗ್ರಾಮದ ಮನೆಗಳಿಗೆ ನುಗ್ಗಿದ ನೀರು , ಮಣ್ಣು : ಗ್ರಾಮ ಭಾಗಶಃ ಜಲಾವೃತ

ಅನಾಹುತ ಮಳೆಯಿಂದ ಗುಡ್ಡ ಕುಸಿತ: ಮಾಣಿಕವಾಡಿ ಗ್ರಾಮದ ಮನೆಗಳಿಗೆ ನುಗ್ಗಿದ ನೀರು , ಮಣ್ಣು : ಗ್ರಾಮ ಭಾಗಶಃ ಜಲಾವೃತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 5 :
ನಗರದಲ್ಲಿ ಸೋಮವಾರ ಮುಂಜಾನೆ ಅನಾಹುತ ಮಳೆ ಸುರಿದಿದ್ದು, , ಮಳೆಯಿಂದ ಸಮಿಪದ ಮಾಣಿಕವಾಡಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮಗಳಶರಸ್ತೆ ಜಲಾವೃತವಾಗಿದ್ದು, ಗ್ರಾಮದ ಜನರು ಪರದಾಡುವಂತ್ತಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ನಿರಂತರ ಮಳೆಯಿಂದಾಗಿ ಇಂದು ಗೋಕಾಕ ಫಾಲ್ಸ್ ನಲ್ಲಿ ಗುಡ್ಡ ಕುಸಿದು ಮನೆಯ ಒಳಗೆ ನೀರು ಮತ್ತು ಮಣ್ಣು ನುಗ್ಗಿದ ಘಟನೆ ಸಮೀಪದ ಮಾಣಿಕವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹಲವು ಮನೆಗಳು ಜಲಾವೃತವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಗೋಕಾಕ ಫಾಲ್ಸ್ ದಲ್ಲಿ ಗುಡ್ಡಕುಸಿತ ಉಂಟಾಗಿದ್ದು, ಕಲ್ಲು ಬಂಡೆಗಳು ರಸ್ತೆಗೆ ಬಂದ ಬಗ್ಗೆ ವರದಿಯಾಗಿದೆ.
ಭಾರಿ ಮಳೆ ಸುರಿದ ಪರಿಣಾಮ ಮಾಣಿಕವಾಡಿ ಗ್ರಾಮದಲ್ಲಿ ಒಂದು ಭಾಗ ಸಂಪೂರ್ಣ ಹಾನಿಗೊಂಡಿದೆ. ಮನೆಯ ಮೇಲ್ಭಾಗವು ಹಂಚಿನ ಮೇಲ್ಚಾವಣಿ ಹಾನಿಯಾಗಿವೆ.
ಗುಡ್ಡ ಕುಸಿದ ರಭಸಕ್ಕೆ ಮತ್ತು ಭಾರಿ ಮಳೆಗೆ ಗ್ರಾಮದ ಒಳ ರಸ್ತೆ ಸಂಪೂರ್ಣ ನಾಶವಾಗಿದೆ. ಸ್ಥಳಕ್ಕೆ ಕೊಣ್ಣೂರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಲಿ , ಸಂಬಂಧಪಟ್ಟ ಅಧಿಕಾರಿಗಳಾಗಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐದು ಮನೆಗಳು ಸಂಪೂರ್ಣ ಹಾನಿಯಾಗಿವೆ ಎಂದು ವರದಿಯಾಗಿದೆ. ಇಂತಹ ಅನಾಹುತ ಮಳೆಯಾಗಿ ಗ್ರಾಮಕ್ಕೆ ನೀರು ನುಗ್ಗಿದರಿಂದ ಬಹುಶಃ ಮೇಘ ಸ್ಟೋಟವಾಗಿರ ಬಹುದು ಎಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ. ಮಾಣಿಕವಾಡಿ ಗ್ರಾಮದ ಮಂದಿಗೆ ಗುಡ್ಡ ಇನ್ನೂ ಕುಸಿಯುವ ಭೀತಿ ಉಂಟಾಗಿದ್ದು, ಭಾರಿ ಮಳೆ ಸುರಿದರೆ ಮನೆಗಳು ಬಿಳುವ ಭೀತಿ ಉಂಟಾಗಿ ಭಯಭೀತರಾಗಿದ್ದಾರೆ.