RNI NO. KARKAN/2006/27779|Saturday, June 14, 2025
You are here: Home » breaking news » ಗೋಕಾಕ : ವಿದ್ಯಾರ್ಥಿಗಳಿಗೆ ದೃಢಸಂಕಲ್ಪ , ಆತ್ಮಬಲ ಹಾಗೂ ಛಲ ವಿದ್ದರೆ, ಸಾಧನೆಯ ಗುರಿ ತಲುಪಲು ಸಾಧ್ಯ : ಪ್ರೊ.ಗಂಗಾಧರ ಮಳಗಿ

ಗೋಕಾಕ : ವಿದ್ಯಾರ್ಥಿಗಳಿಗೆ ದೃಢಸಂಕಲ್ಪ , ಆತ್ಮಬಲ ಹಾಗೂ ಛಲ ವಿದ್ದರೆ, ಸಾಧನೆಯ ಗುರಿ ತಲುಪಲು ಸಾಧ್ಯ : ಪ್ರೊ.ಗಂಗಾಧರ ಮಳಗಿ 

ವಿದ್ಯಾರ್ಥಿಗಳಿಗೆ ದೃಢಸಂಕಲ್ಪ , ಆತ್ಮಬಲ ಹಾಗೂ ಛಲ ವಿದ್ದರೆ, ಸಾಧನೆಯ ಗುರಿ ತಲುಪಲು ಸಾಧ್ಯ : ಪ್ರೊ.ಗಂಗಾಧರ ಮಳಗಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 13 :
ವಿದ್ಯಾರ್ಥಿಗಳಿಗೆ ದೃಢಸಂಕಲ್ಪ , ಆತ್ಮಬಲ ಹಾಗೂ ಛಲ ವಿದ್ದರೆ, ಸಾಧನೆಯ ಗುರಿ ತಲುಪಲು ಸಾಧ್ಯ ಎಂದು ಪ್ರೊ. ಗಂಗಾಧರ ಮಳಗಿ ಹೇಳಿದರು.

ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿಪೂರ್ವ ಮಹಾವಿದ್ಯಾಲಯದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ, ಸಂಗೀತ,ಕ್ರೀಡೆ, ವಿಜ್ಞಾನ ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳ ಬದುಕು ಆದರ್ಶವಾಗಬೇಕು. ತಂದೆ ತಾಯಿಗಳನ್ನು , ಗುರು ಹಿರಿಯರನ್ನು ಗೌರವಿಸಿ ಸಂಸ್ಕಾರವಂತರಾಗಿ ಬಾಳಿರೆಂದು ವಿದ್ಯಾರ್ಥಿಗಳಿಗೆ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಆಡಳಿತಾಧಿಕಾರಿ ಬಿ.ಕೆ ಕುಲಕರ್ಣಿ, ಪ್ರಾಚಾರ್ಯ ಅರುಣ್ ಪೂಜೇರಾ, ಉಪನ್ಯಾಸಕರಾದ ಎಸ್.ಎಂ ಮುಲ್ಲಾ, ಎಸ್.ಬಿ.ಬಾಗಾಯಿ, ವಿದ್ಯಾರ್ಥಿ ಪ್ರತಿನಿಧಿಗಳಾದ ರೆಹಾನ ಪೀರಜಾದೆ, ಚೈತ್ರಾ ಮುರಗೋಡ ಇದ್ದರು.
ವಿದ್ಯಾರ್ಥಿನೀಯರಾದ ಪೂಜಾ ದೇಗಾಂವಿಮಠ ಸ್ವಾಗತಿಸಿದರು, ಶ್ರೇಯಾ ಹಾಗೂ ವಿಜಶ್ರೀ ನಿರೂಪಿಸಿದರು ಸಾನಿಯಾ ಅಮ್ಮಣಗಿ ವಂದಿಸಿದರು.

Related posts: