RNI NO. KARKAN/2006/27779|Monday, June 16, 2025
You are here: Home » breaking news » ಮೂಡಲಗಿ:ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗೋಕಾಕ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ್ ಆಯ್ಕೆ

ಮೂಡಲಗಿ:ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗೋಕಾಕ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ್ ಆಯ್ಕೆ 

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗೋಕಾಕ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ್ ಆಯ್ಕೆ

ಮೂಡಲಗಿ ಸೆ 30 : ಸನ್ 2016-17 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಯಾದವಾಡ ಗ್ರಾಮ ಪಂಚಾಯತಿ ಆಯ್ಕೆಯಾಗಿದೆ. ಈ ಪ್ರಶಸ್ತಿಯನ್ನು ಬರುವ ದಿನಾಂಕ 02-10-2017 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯಪಾಲರು ,ಮುಖ್ಯ ಮಂತ್ರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರು ಪ್ರದಾನ ಮಾಡಲಿದ್ದಾರೆ.

2016-17 ನೇ ಸಾಲಿಗಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಂಚಾಯತಿಯ ಪಂಚತಂತ್ರದ ತತ್ರಾಂಶದ ಮೂಲಕ ಆವ್ಹಾನಿಸಿರುವ ಅರ್ಜಿಗಳಲ್ಲಿ ತಾಲೂಕಾವಾರು ಅತೀಹೆಚ್ಚು ಅಂಕಗಳಿಸಿದ ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದ ಸಮಿತಿಗೆ ಕಳುಹಿಸಿ ಗ್ರಾಮ ಪಂಚಾಯತ್ ಆಡಳಿತ ಮತ್ತು ಆರ್ಥಿಕತೆಯ ಸಾಧನೆಯನ್ನು ಪರಿಗಣಿಸಿ ಪರಿಶೀಲನಾ ವರದಿ ಪಡೆದು ಶಿಫಾರಸ್ಸು ಮಾಡಲಾಗಿತ್ತು. ಈ ಶಿಫಾರಸ್ಸಿನ ಅನ್ವಯ ರಾಜ್ಯ ಮಟ್ಟದ ಪರಾಮರ್ಶನ ಸಮಿತಿಯಲ್ಲಿ ಪರಿಶೀಲಿಸಿ ಗ್ರಾಮೀನಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಪಡೆದ ಅನುಮೋದನೆಯಲ್ಲಿ ಯಾದವಾಡ ಗ್ರಾಮ ಪಂಚಾಯತಿಯು ಆಯ್ಕೆಯಾಗಿದೆ.

ದಿನಾಂಕ 29-08-2017 ರಂದು ಗಾಂಧಿ ಗ್ರಾಮ ಪುರಸ್ಕಾರದ ಪರಿಶೀಲನೆಯನ್ನು ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿ ಕೆ.ಎಸ್.ಕುಲಕರ್ಣಿ, ಹಾಗೂ ಎಂ.ಎಂ. ಮುಲ್ಲಾ ಅವರ ನೇತೃತ್ವದ ತಂಡದೊಂದಿಗೆ ಗ್ರಾಮ ಪಂಚಾಯತ ಅಧ್ಯಕ್ಷ ವಾಯ್.ಎಲ್. ನ್ಯಾಮಗೌಡರ, ಗೋಕಾಕ ತಾಲೂಕಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಫ್ .ಜಿ ಚಿನ್ನನವರ ಇವರ ಸಮ್ಮುಖದಲ್ಲಿ ಗ್ರಾಮ ನೈರ್ಮಲ್ಯೀಕರಣ, ನೈಸರ್ಗಿಕ ಸಂಪನ್ಮೂಲಗಳ ಕಾಮಗಾರಿಗಳು, ಶುದ್ಧ ಕುಡಿಯುವ ನೀರು, ಹಾಗೂ ಇತರೆ ಮೂಲಭೂತ ಸೌಕರ್ಯಗಳ ಬಳಕೆಯ ಕುರಿತು ಗ್ರಾಮ ಪಂಚಾಯತಿಯ ಪಂಚತಂತ್ರದ ಪ್ರಶ್ನಾವಳಿಗಳ ಮೂಲಕ ಸಮಗ್ರವಾಗಿ ಕಡತಗಳನ್ನು ಪರಿಶೀಲಿಸಿದರು. ನಂತರ ಪಂಚಾಯತಿಯಲ್ಲಿ ಅನುಷ್ಠಾನಗೊಳಿಸಲಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು, ಸ್ವಚ್ಛಗ್ರಾಮ ಯೋಜನೆಯಡಿಯಲ್ಲಿ ಶೌಚಾಲಯ, ಬೀದಿ ದೀಪಗಳ ನಿರ್ವಹಣೆ, ಚರಂಡಿ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸುವಿಕೆ ಮುಂತಾದ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಯಾದವಾಡ ಗ್ರಾಮ ಪಂಚಾಯತಿಗೆ ಗಾಂಧೀ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಲು ಸಹರಿಸಿದ ಸ್ಥಳೀಯ ಶಾಸಕರಾದ  ಬಾಲಚಂದ್ರ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರಾದ  ರಮೇಶ ಜಾರಕಿಹೊಳಿ, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಗ್ರಾ.ಪಂ. ಸದಸ್ಯರಿಗೆ, ಗ್ರಾ.ಪಂ. ಎಲ್ಲ ಸಿಬ್ಬಂದಿ ವರ್ಗಕ್ಕೆ ಹಾಗೂ ಗ್ರಾಮದ ಸಮಸ್ತ ನಾಗರಿಕರಿಗೆ ಗ್ರಾಮ ಪಂಚಾಯತ ಅಧ್ಯಕ್ಷರಾದ ವಾಯ್,ಎಲ್, ನ್ಯಾಮಗೌಡರ , ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಆಯ್.ಬಿ. ಮುದ್ದವ್ವಗೋಳ ಅವರು ಅಭಿನಂದನೆ ಸಲ್ಲಿಸಿದ್ದಾರೆ.

 

Related posts: