RNI NO. KARKAN/2006/27779|Sunday, June 15, 2025
You are here: Home » breaking news » ಘಟಪ್ರಭಾ:ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ : ಮಾಜಿ ಸಚಿವ ಬಾಲಚಂದ್ರ ಸಲಹೆ

ಘಟಪ್ರಭಾ:ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ : ಮಾಜಿ ಸಚಿವ ಬಾಲಚಂದ್ರ ಸಲಹೆ 

ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ : ಮಾಜಿ ಸಚಿವ ಬಾಲಚಂದ್ರ ಸಲಹೆ
ಘಟಪ್ರಭಾ ಸೆ 19 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ನಲ್ಲಾನಟ್ಟಿ ಗ್ರಾಮದಲ್ಲಿ 1.17 ಕೋಟಿ ರೂ. ವೆಚ್ಚದ ಸುವರ್ಣ ಗ್ರಾಮ ಯೋಜನೆಯ ಮುಂದುವರೆದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ನಲ್ಲಾನಟ್ಟಿ ಗ್ರಾಮದ ಪ್ರಗತಿಗೆ ಸಾಧ್ಯವಿರುವ ಎಲ್ಲ ಸರ್ಕಾರಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ. ಇದರಿಂದ ಗ್ರಾಮದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ. ಒಂದಾಗಿ, ಒಗ್ಗಟ್ಟಾಗಿ ದುಡಿದರೆ ಮಾತ್ರ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಕಾಡಾ ಅನುದಾನದಲ್ಲಿ 20 ಲಕ್ಷ ರೂ. ವೆಚ್ಚದ ನಲ್ಲಾನಟ್ಟಿ ಎನ್‍ಎಸ್‍ಎಫ್ ಶಾಲೆಯಿಂದ ಬಸವೇಶ್ವರ ಗುಡಿವರೆಗಿನ ರಸ್ತೆ ಕಾಮಗಾರಿ ಹಾಗೂ 10 ಲಕ್ಷ ರೂ. ವೆಚ್ಚದ ಎಸ್‍ಸಿ ಕಾಲನಿಯ ಕಾಂಕ್ರೀಟ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಹಿರಿಯರಾದ ಕೆ.ವಾಯ್. ಕುಳ್ಳೂರ, ತಾಪಂ ಮಾಜಿ ಸದಸ್ಯ ವೆಂಕಪ್ಪ ಅರಭಾವಿ, ಪರಸಪ್ಪ ಮೇಲ್ಮಟ್ಟಿ, ಅಡಿವೆಪ್ಪ ಎಂಟೆತ್ತಿನವರ, ಬಾಳಾರಾಮ ಕುಳ್ಳೂರ, ಎಚ್.ಎಸ್. ಸಾಗರ, ಲಕ್ಷ್ಮಣ ಕುಳ್ಳೂರ, ಲಕ್ಕಪ್ಪ ಅರಭಾವಿ, ಸಿದ್ರಾಮ ಕುಳ್ಳೂರ, ಎಸ್.ಎಸ್. ಪಾಟೀಲ, ಪರಸಪ್ಪ ಕುಳ್ಳೂರ, ರಾಮಪ್ಪ ಕುಳ್ಳೂರ, ಜಯಪ್ಪ ವಾಲಿಕಾರ, ಪರಸಪ್ಪ ಗದಾಡಿ, ಮಹಾನಿಂಗ ಮೇಲ್ಮಟ್ಟಿ, ಭೂಸೇನಾ ನಿಗಮದ ಎಇಇ ಚಿಂಚೋಳಿಕರ, ಮುಂತಾದವರು ಉಪಸ್ಥಿತರಿದ್ದರು.

Related posts: