ಗೋಕಾಕ:ಸಚಿವ ಈಶ್ವರಪ್ಪ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ : ಶಾಸಕ ರಮೇಶ ಸ್ವಷ್ಟಣೆ
ಸಚಿವ ಈಶ್ವರಪ್ಪ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ : ಶಾಸಕ ರಮೇಶ ಸ್ವಷ್ಟಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 17 :
ಕೆ.ಎಸ್.ಈಶ್ವರಪ್ಪ ನಮ್ಮ ಆತ್ಮೀಯ ಗಳೆಯ ಅವರ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಗುರುವಾರದಂದು ನಗರದ ತಾಲೂಕಾ ಪಂಚಾಯಿತಿ ಕಾರ್ಯಾಲದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.
ಈಶ್ವರಪ್ಪ 17 ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿಲ್ಲ ಬಿಜೆಪಿಗೆ ಬಹುಮತ ಬಂದಿದ್ದರೆ ಈ ಸಮಸ್ಯೆ ಉದ್ದಭವಿಸುತ್ತಿರಲಿಲ್ಲ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಸಚಿವ ಈಶ್ವರಪ್ಪ ನಮ್ಮ ಪರವಾಗಿದ್ದಾರೆ. 17 ಜನ ಶಾಸಕರು ಬಿಜೆಪಿಗೆ ಸೇರಿದರಿಂದಲೇ ನಾವು ಈ ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆ ಎನ್ನುವ ಈಶ್ವರಪ್ಪ 17 ಜನ ಶಾಸಕರ ಉಪಕಾರ ತಿರಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಹಿಂದುಳಿದ ಜನಾಂಗದ ನಾಯಕ ಈಶ್ವರಪ್ಪ ಅವರನ್ನು ತುಳಿಯಲ್ಲಿಕೆ ಕೆಲವೊಂದು ಮಾಧ್ಯಮಗಳು ಈ ರೀತಿಯಾಗಿ ಬಿತ್ತರಿಸಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸಿಎಂ ಬದಲಾವಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಯಡಿಯೂರಪ್ಪ ಬದಲಾವಣೆ ಪ್ರಶ್ನೆಗೆ ಇಲ್ಲಾ ನಾವು ಅಮಿತ್ ಶಾ ಮತ್ತು ಯಡಿಯೂರಪ್ಪ ಅವರನ್ನು ನಂಬಿ ನಾವು ಬಿಜೆಪಿ ಪಕ್ಷಕ್ಕೆ ಬಂದಿದ್ದೆವೆ. ಕೆಲ ಶಾಸಕರು ಈ ಸಮಸ್ಯೆಯನ್ನು ಉದ್ಭವಿಸುತ್ತಿದ್ದಾರೆ. ಅಂತಹ ಶಾಸಕರ ನಾನು ಮನವಿಮಾಡಿಕೊಳ್ಳುತ್ತೇನೆ ತಮ್ಮ ಏನೇ ಸಮಸ್ಯೆಗಳಿದ್ದರೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತನಾಡಿ ಬಗೆಹರಿಸಕೊಳ್ಳಬೇಕು ಮುಂದಿನ ಸಾರ್ವತಿಕ ಚುನಾವಣೆಯನ್ನು ಸಹ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಸುತ್ತೇವೆ ಎಂದರು.
ಸಚಿವ ಸಿ.ಪಿ ಯೋಗೇಶ್ವರ ಅವರೊಂದಿಗೆ ಮಾತನಾಡುತ್ತೇನೆ : ಸರಕಾರ ರಚನೆಯಾಗಲು ಸಚಿವ ಸಿ.ಪಿ ಯೋಗೇಶ್ವರ ಕೊಡುಗೆಯು ಇದೆ. ಬಹಳ ದಿನಗಳಿಂದ ಯೋಗೇಶ್ವರ ಅವರನ್ನು ನಾನು ಭೇಟಿಯಾಗಿಲ್ಲ ಆದಷ್ಟು ಶೀಘ್ರ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಸಮಸ್ಯೆ ಏನೇ ಇದ್ದರು ಮುಖ್ಯಮಂತ್ರಿಗಳೊಂದಿಗೆ ಕೂತು ಚರ್ಚೆ ನಡೆಸುತ್ತೇವೆ ಅವರ ಹೇಳಿಕೆ ಬೇರೆ ಆರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.