RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಉಚಿತ ಅನ್ನದಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ : ಗ್ರಾಪಂ ಸದಸ್ಯ ಸುರೇಶ ಸನದಿ

ಗೋಕಾಕ:ಉಚಿತ ಅನ್ನದಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ : ಗ್ರಾಪಂ ಸದಸ್ಯ ಸುರೇಶ ಸನದಿ 

ಉಚಿತ ಅನ್ನದಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ : ಗ್ರಾಪಂ ಸದಸ್ಯ ಸುರೇಶ ಸನದಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 26 :

 

ಕಳೆದ 3 ವರ್ಷದಗಳಿಂದ ಏಕತಾ ಅನ್ನದಾಸೋಹ ಸಮಿತಿ ಬಡ ರೋಗಿಗಳಿಗೆ ಉಚಿತ ಅನ್ನದಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಮದಾಪೂರ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಸನದಿ ಹೇಳಿದರು

ಮಂಗಳವಾರದಂದು ನಗರದ ಸರಕಾರಿ ಆಸ್ವತ್ರೆಯ ಆವರಣದಲ್ಲಿ ಇಲ್ಲಿನ ಏಕತಾ ಅನ್ನದಾಸೋಹ ಸಮಿತಿ ಅವರು ಹಮ್ಮಿಕೊಂಡ ಉಚಿತ ಅನ್ನದಾನ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನ್ನದಾನ ಮಹಾದಾನ, ಬಡ ರೋಗಿಗಳಿಗೆ ಮತ್ತು ರೋಗಿಗಳ ಸಹಾಯಕರಾಗಿ ಬರುವವರು ಊಟಕ್ಕಾಗಿ ಬೇರೆ ಕಡೆ ಹೋಗಲು ಸಾಧ್ಯವಿಲ್ಲ. ಕೆಲವರಿಗೆ ಬಡತನದಿಂದ ನಗರದಲ್ಲಿ ಹೋಟೆಲ್‌ಗಳಿಗೆ ಹೋಗಿ ಊಟ ಮಾಡಲು ತೊಂದರೆಯಾಗುತ್ತದೆ. ಇಂತಹವರಿಗೆ ಏಕತಾ ಅನ್ನದಾಸೋಹ ಸಮಿತಿಯವರು ಅನ್ನದಾನ ಸೇವೆಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಯುವಕರು ಮುಂದೆ ಬಂದು ಇಂತಹ ಸಮಾಜಿಕ ಕಳಕಳಿಯುಳ್ಳ ಕಾರ್ಯಗಳನ್ನು ಹಮ್ಮಿಕೊಳ್ಳುವ ಮುಂಖಾತರ ಸಮಾಜವನ್ನು ಕಟ್ಟುವ ಕಾರ್ಯಮಾಡಬೇಕು ಎಂದರು.

ಈ ಸಂದರ್ಭದಲ್ಲಿ ನಿವೃತ್ತ ವೈದ್ಯ ಡಾ. ಆರ್. ಎಸ್.ಬೆನಚಿನ್ನಮರಡಿ , ಡಾ.ಕೋಣಿ , ಸಮಿತಿಯ ಮುಖಂಡ ಅಜರ ಮುಜಾವರ , ಸದ್ದಾಂ ಸೌದಾಗರ , ಗುಲಾಬ ಪುಲತಾಂಬೆ, ಶಬ್ಬೀರ ಮುಲ್ಲಾ, ಮೋಸಿನ ಬುಡ್ಡನ್ನವರ, ಮಹಮದ್ ಮತ್ತೆ, ರಿಯಾಜ ಅಂಕಲಗಿ, ರೋಶನಬೇಗ ಜಮಾದಾರ, ಮೋಸಿನ ಸೈಪಿ ಸೇರಿದಂತೆ ಇತರರು ಇದ್ದರು .

Related posts: