ಗೋಕಾಕ:ಮಾಸಿಕ ಚಿಂತನ ಗೋಷ್ಠಿ ಕಾರ್ಯಕ್ರಮ
ಮಾಸಿಕ ಚಿಂತನ ಗೋಷ್ಠಿ ಕಾರ್ಯಕ್ರಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 13 :
ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀ ಸಿದ್ದಲಿಂಗ ಸಮುದಾಯ ಭವನದಲ್ಲಿ ದಿ.15 ರಂದು ಮುಂಜಾನೆ 12 ಗಂಟೆಗೆ ಮಾಸಿಕ ವಿಚಾರ ಚಿಂತನ ಗೋಷ್ಠಿ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಮಠದ ಪೀಠಾಧಿಕಾರಿ ಶ್ರೀ ನಿಜಗುಣ ದೇವರು, ಸಾನಿಧ್ಯವನ್ನು ದಾದನಟ್ಟಿಯ ಶಿವಾನಂದ ಮಠದ ಶ್ರೀ ನಿಜಾನಂದ ಸ್ವಾಮಿಜಿ ವಹಿಸುವರು. ಕಲ್ಲೋಳಿಯ ಬಸಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಾ.ಪಂ ಸದಸ್ಯ ಬಸವರಾಜ ಹುಕ್ಕೇರಿ, ರಾಮನಾಯ್ಕ ನಾಯ್ಕ, ಮುತ್ತೇಪ್ಪ ಕುಳ್ಳೂರು ವಕೀಲರು ಆಗಮಿಸುವರು. ಈ ಸಂದರ್ಭದಲ್ಲಿ ಜನೇವರಿ 2021ರಲ್ಲಿ ಜರುಗುವ ಜಾತ್ರಾ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗುವುದು. ಶ್ರೀಗಳ ಕಿರೀಟ ಮಹಾಪೂಜೆ ಜರಗುವುದು. ಅನ್ನ ದಾಸೋಹವನ್ನು ಮಲ್ಲಿಕಾರ್ಜುನ ನಾಂವಿ ಹಾಗೂ ಚಿಂತನದಾಸೋಹ ಲಕ್ಷ್ಮಣ ಬಡಿಗೇರ ಇವರಿಂದ ಜರುಗಲಿದೆ. ಸಿದ್ದಲಿಂಗೇಶ್ವರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಲಿದೆ. ಭಕ್ತಾಧಿಗಳು ಪಾಲ್ಗೊಳ್ಳಲು ಕೋರಲಾಗಿದೆ.