ಘಟಪ್ರಭಾ:ಪತ್ರಕರ್ತರಿಗೆ ಸೆನಿಟೈಜರ್ ಹಾಗೂ ಮಾಸ್ಕ ವಿತರಣೆ
ಪತ್ರಕರ್ತರಿಗೆ ಸೆನಿಟೈಜರ್ ಹಾಗೂ ಮಾಸ್ಕ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ ,ಘಟಪ್ರಭಾ ಅ 24 :
ಸ್ಥಳೀಯ ಪತ್ರಕರ್ತರಿಗೆ ಕ್ರೇಡಿಟ್ ಆಕ್ಸಿಸ್ ಗ್ರಾಮೀಣಕೂಟ್ ಲಿ. ಬ್ಯಾಂಕ ವತಿಯಂದ ಸೆನಿಟೈಜರ್ ಹಾಗೂ ಮಾಸ್ಕಗಳನ್ನು ಸೋಮವಾರ ವಿತರಿಸಿಲಾಯಿತು.
ಬ್ಯಾಂಕಿನ ಏರಿಯಾ ಮ್ಯಾನೆಜರ ಜಿ.ವಿ.ವಿಶ್ವನಾಥ ಮಾತನಾಡಿ, ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸ ಸಿಬ್ಬಂದಿಗಳ ಜೊತೆಗೆ ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೂ ಸುರಕ್ಷತೆ ಅಗತ್ಯವಾಗಿದ್ದು, ಇದನ್ನು ಅರಿತು ನಮ್ಮ ಸಂಸ್ಥೆಯಿಂದ ಪತ್ರಕರ್ತರಿಗೆ ಸೆನಿಟೈಜರ್ ಹಾಗೂ ಮಾಸ್ಕಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಬ್ರಾಂಚ್ ಮ್ಯಾನೆಜರ ಡಿ.ಜೆ.ಗಜಾನನ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ರಜಪೂತ, ಪತ್ರಕರ್ತರಾದ ದಿಲಾವರ ಬಾಳೆಕುಂದ್ರಿ, ಸಲೀಮ ಕಬ್ಬೂರ, ಸುಭಾಸ ಗಾಯಕವಾಡ, ಗಣೇಶ ಗಾಣಿಗ, ರಮೇಶ ಜಿರಲಿ, ಸೇರಿದಂತೆ ಅನೇಕರು ಇದ್ದರು.